ನಾ ಕೆಂಪು ಬಸ್ಸು ~~~~~~~~~ ದಿನ ದಿನವೂ ದುಡಿದು ಬಸವಳಿಯುತ್ತಿದ್ದೆ ಕ್ಷಣ ಕ್ಷಣವೂ ನಡೆದು ನಲಿದಾಡುತ್ತಿದ್ದೆ ಹೀಗೆ ಹೋಗಿ ಹಾಗೆ ಬಂದು ಮತ್ತೆ ಮತ್ತೆ ಬಂದು ಹೋಗಿ ದುಡಿಮೆ ಮಾಡುತ್ತಿದ್ದೆ ||ಪ|| ಯಾರೋ ಮಾಡಿದ ತಪ್...
ಜಗ ನಿನದೇ ~~~~~~~ ನಿನಗೆ ಏನ ನೀಡಲಿ ತಂದೆ ನಿನ್ನ ಅನುಗ್ರಹದಿಂ ಬಂದೆ ನಿನ್ನದೇ ನಿಮಿತ್ತಕೆ ಇಳಿಸಿದೆ ನಿನ್ನ ಮನದಿಚ್ಚೆ ಕುಣಿಸಿದೆ ಅಲ್ಪ ನಾನೇನನೂ ಬೇಡದೇ ನೀಡುವ ಮನವ ಮಾಡಿದೆ ನಿನ್ನ ನಾನರಿಯದೇ ಹೋದೆ ಅದು ಇದೇ ಬೇಕೆಂದು ಎಂದೆ ನಿನ್ನ ಕೊಡುಗೈಯ ಮುಂದೆ ಬಲು ಎಳೆಯನು ನಾ ತಂದೆ ಚಿನ್ನವೆ ಬೇಕೆಂದು ಬೇಡಿದೆ ತುತ್ತು ಅನ್ನವ ನೀ ನೀಡಿದೆ ಜಗಜ್ಯೋತಿಯು ನೀನೇ ತೃಣಮಾತ್ರವು ನಾನೇನೆ ನಾನೇನು ನೀಡಲಾರನೇ ಅಣುರೇಣುವೂ ನಿನದೇನೆ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೧/೧೧/೨೦೧೭
ಗಝಲ್ ೩ ~~~~~~~ ಅಂದ ಚೆಂದ ತುಂಬಿದ ಆನಂದ ಚಂದಿರ ನಮ್ಮ ನುಡಿ ಕನ್ನಡ ಅರಳು ಹುರಿದಂತೆ ಮನವು ಮಿಡಿವಂತೆ ನುಡಿಯೆ ನಮ್ಮ ನುಡಿ ಕನ್ನಡ ಮಾಮರದ ಕೋಗಿಲೆ ಧನಿಯಂತೆ ಮನಕೆ ತಂಪನ್ನೀವ ನುಡಿ ಕನ್ನಡ ಮಾತೆಯ ಜೋಗುಳಕೆ ಮೈಮ...
ಸಣ್ಣ ಕಥೆ ~~~~~ ಗೋಪಿ ಹದಿಹರೆಯದ ಯುವಕನಾದರೂ ಬಡತನದಲ್ಲಿ ಬೆಳೆದು ತಮ್ಮ ತಂಗಿಯರ ವಿದ್ಯೆಗೆ ಮೂರು ಹೊತ್ತು ಕೂಳಿಗೆ ಅಮ್ಮನಿಗೆ ಹೊರೆಯಾಗಬಾರದೆಂದು ವಿದ್ಯೆಯನ್ನು ಮೊಟಕುಗೊಳಿಸಿ ಹೊರ ಊರಿನ ಹಾದಿ ಹಿಡಿದ...
ಭಾವ × ಬತ್ತಿ ~~~~~~~ ಕವಿ ಭಾವ ಜೀವಿ ಭಾವ ಕವಿ ಜೀವ ಕವಿ ಬೇಡಿಕೆ ಕಿವಿ ಕಿವಿ ಮೆಚ್ಚುಗೆ ಕವಿ ಕಿವಿ ಓದಿ ರಸಸ್ವಾದ ಕವಿ ನುಡಿಯೆ ವೇದ ನಿಜ ಕವಿಗಿಲ್ಲ ಭೇದ ನಿಜ ಕಿವಿಗೆ ಮೋದ ಸ್ವಾದ ಅರಿಯುವ ಕಿವಿ ಸವಿಯುತ ಕವಿತೆ ಓದಿ ತಾನಾಗ ಬಯಸಿ ಕವಿ ಭಾವ ಚಿಮ್ಮಿದರೆ ಕವಿ ಬಿರಿಯದಿರೆ ಸುಮ್ಮನಿರಿ ಅಪಹರಿಸಿ ಭಾವದ ಸಿರಿ ಕೃತಿಚೌರ್ಯ ಅಲ್ಲ ಶೌರ್ಯ ಕವಿಮನಕೆ ಎಸಗಿದ ಕೌರ್ಯ ಸರಿಯಲ್ಲ ತಮ್ಮ ಈ ಕಾರ್ಯ. ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೮/೧೦/ ೨೦೧೭
ಗಝಲ್ ೨ ~~~~~~~ ಕರೆಯದೇ ಬಂದವನು ನೀನೇ ಗೆಳೆಯ ಮರು ನುಡಿಯದೇ ನಡೆದವನು ಸಹ ನೀನೇ ಗೆಳೆಯ ನಿನಗಾಗಿ ನಿನ್ನ ಏಳಿಗೆಗಾಗಿ ಏನೇನೆಲ್ಲಾ ನುಡಿದೆ ನೀನು ನೀನಾಗುವ ಮುನ್ನ ಮಿಥ್ಯೆಯ ಅರುಹಿದವ ಸಹ ನೀನೇ ಗೆಳೆಯ ಅನ್ಯರ ನುಡಿಗೆ ನಿನ್ನ ನೀನೇ ಮಾರಿಕೊಂಡೆ ಅರುಹಿದವರ ಒಳಗುದಿಯ ಅರಿಯದೇ ಹೋದವನು ಸಹ ನೀನೇ ಗೆಳೆಯ ಶಾಂತ ಸರೋವರಕೆ ಕಲ್ಲನ್ನು ಎಸೆದೆ ಸರೋವರದಿ ಅಡಗಿದ ಬೇಗುದಿಯ ಮರೆತವನು ಸಹ ನೀನೇ ಗೆಳೆಯ ಈ ಧರೆಯೊಳು ಇದೆಲ್ಲವೂ ನಿತ್ಯವೆಂದು ನೀನಂದೆ ನಿನ್ನೊಳ ಮಿಥ್ಯೆಯ ನಿನಗರಿಯದೇ ಹೊರ ತಂದವನು ಸಹ ನೀನೇ ಗೆಳೆಯ "ಸಿಡಿಲು" ನ ಆಗಸದಿ ಚುಕ್ಕಿಯಾಗುವ ಅವಕಾಶ ಇತ್ತು. ಆಗಸದ ಚುಕ್ಕಿಯಾಗದೆ ಕಪ್ಪು ಚುಕ್ಕಿಯಾದ ಮಸಿ ಸಹ ನೀನೇ ಗೆಳೆಯ "ಸಿಡಿಲು" ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೫/೧೦/೨೦೧೭
ಚಟ ಚಟ್ಟ ~~~~~~~~~~~ ಅವನೊಬ್ಬ ಇದ್ದ ಕುಡುಕ ಸಂಸಾರ ಎಂದರೆ ಸಿಡುಕ ಕುಡಿದೇ ಇದ್ರೆ ಕೈ ನಡುಕ ಬೆಳಗ್ಗೆದ್ದು ಹೆಂಡ ಹುಡುಕ ತಿಂಡಿ ಒಂದು ಮನೆಯಲ್ಲಿ ಮಧ್ಯಾಹ್ನ ಊಟ ಕೊಟ್ಟಲ್ಲಿ ತೂರಾಡುತ್ತಾ ಬೀದಿಯಲ್ಲಿ ರಾತ್ರಿ ಮಾತ್ರ ಚರಂಡಿಯಲ್ಲಿ ಯಾರದೇ ಕೆಲಸ ಮುಗಿಸಿ ಕೊಟ್ಟ ಕಾಸು ಜೇಬಿಗೆ ಇಳಿಸಿ ಹುಟ್ಟು ಗುಣ ಬಿಡದ ದೈನೇಸಿ ಕುಡಿತ ಬಿಡಲಾರದ ಬೇವರ್ಸಿ ಮನೇಲಿ ಮಲಿಗಿದ್ದು ಕನಸು ಮಲಗಿದ ಮನೆಯಲಿ ಸುಸ್ಸು ಏನೇ ಆದರೂ ಗಟ್ಟಿ ಪಿಂಡ ಅನಾಥನಂತೆ ಸಾವು ಕಂಡ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೫/೧೦/೨೦೧೭
ಕರುನಾಡು ~~~~~~ ಕರುನಾಡು ಸಕಲ ಐಸಿರಿಯ ಬೀಡು ಕರುಣೆಯ ಹೆಸರು ಪಡೆದಿಹ ನಾಡು ಹಚ್ಚಿದರೆ ಹಸ್ತ ಹೊನ್ನಾಗುವ ನಾಡು ತಂಗಾಳಿ ಅಲೆಯಲಿ ಶ್ರೀ ಗಂಧದ ಬೀಡು ಕಂದಾ ಎಂದು ಕರೆವ ಅಮ್ಮನ ನುಡಿ ಕಂದಗೆ ಅಮ್ಮನ ಮಡಿಲೆ ದೇವರ ಗುಡಿ ಎನಿತು ಇನಿತಾಗಿಹುದು ನುಡಿ ಕನ್ನಡ ಸಾವು ಬಂದರೂ ಸತ್ಯವನೆ ನೀ ನುಡಿ ಕವಿ ಕೋಗಿಲೆಗಳ ಹಾಡು ನೀಡಿದ ಪಾಡು ಹರಿವ ತೊರೆಯ ಝುಳು ಝುಳು ಹಾಡು ಶರದಿಯ ಸಮವುಂಟೆ ಸರಿಯಲಿ ಜಾಡು ಸಕಲವ ಸವಿದು ಸಿಹಿ ಕನಸಲಿ ಈಜಾಡು ಜೋಕಾಲಿ ಜೀಕುತಾ ಜೋಗುಳವ ಕೇಳಿ ಮಗು ಮೈಮರೆತು ನಿಲ್ಲಿಸಿ ತನ್ನೆಲ್ಲಾ ಕೇಲಿ ಕನ್ನಡದ ರಾಗ ರಂಜನೆಗೆ ತಲೆದೂಗಿ ತಾಲಿ ಕೈಯಲ್ಲಿ ಹಿಡಿದು ಹೊಡೆಯದಂತೆ ಜೋಲಿ ಸ್ಥಬ್ದವಾಯಿತು ಚೀರಾಡಿದ ಮನದ ಖೋಲಿ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೦/೧೦/೨೦೧೭
ನ್ಯಾನೋ ಕಥೆಗಳು @@@@@@@@ ತಾರಮ್ಮಯ್ಯ ~~~~~~~ ಗೆಳೆಯ ಇನಿಯ ನೀನೆ ಸರ್ವಸ್ವ ನೀನೇ ಮಿನುಗುವ ನಕ್ಷತ್ರ ಎಂದಳು ತನ್ನ ಅಗತ್ಯ ಪೂರೈಕೆಗಾಗಿ. ಅವಶ್ಯಕತೆ ಮುಗಿದಾಗ ತಾರಮ್ಮಯ್ಯ ತೋರಿಸಿ ನಡೆದಳು. ಮುಂದಿನ ಬೇಟೆಗಾಗಿ. ಚಿ...
ಹಣತೆ ವೃಷ್ಠಿ ~~~~~~~ ಮನುಜ ಹಚ್ಚಿದ ಹಣತೆಯ ಗತಿ ನೋಡಿ ಸೀಮಿತ ವೆಚ್ಚದ ತೈಲ, ಹತ್ತಿಯ ಬತ್ತಿಯ ತುದಿಯ ಅಗ್ನಿ, ಬತ್ತಿದ ಹಣತೆಯ ತಳದಿ ಸೇರಿ ಉರಿದು ಕತ್ತಲ ಜೊತೆಗೆ ಸೆಣೆಸಾಡಿ ಆರಿ ಹೋಗಿದೆ ಬೆಳಗೆದ್ದು ನೀವೇ ನೋಡಿ...
ಕರುನಾಡು ~~~~~~ ಕರುನಾಡು ಸಕಲ ಐಸಿರಿಯ ಬೀಡು ಕರುಣೆಯ ಹೆಸರು ಪಡೆದಿಹ ನಾಡು ಹಚ್ಚಿದರೆ ಹಸ್ತ ಹೊನ್ನಾಗುವ ನಾಡು ತಂಗಾಳಿ ಅಲೆಯ ಶ್ರೀ ಗಂಧದ ಬೀಡು ಸಕಲ ಕಲೆಯ ಕಲಿತು ಸಂಗೀತ ಹಾಡು ಕಂದಾ ಎಂದು ಕರೆವ ಅಮ್ಮನ ನುಡಿ ...
ಆದಿ ಕುಲದೇವಿ ಕಾವೇರಿ ~~~~~~~~~~~~~ ವಿಶಿಷ್ಟ ಜನಾಂಗದ ಅಮ್ಮೆ ಆದಿ ಕುಲ ದೇವಿ ಕೊಡಗಿನ ಕೊಡವರ ಮಾತೆ ಶ್ರೀ ಆದಿ ಕಾವೇರಿ ನಿನ್ನ ಮಹಿಮೆಯ ಕಣ್ಣಾರೆ ಕಾಣಲೆಂದು ಸೇರಿ ಬಂದಿಹೆವು ನಾವೆಲ್ಲರೂ ನಾಡ ಜನಗಳು ಸೇರಿ ಮುನಿ ...
ನಿತ್ಯ ನಿರಂತರ ~~~~~~~~ ನಿತ್ಯ ನಿರಂತರ ನಮ್ಮಯ ಪಯಣ ಹುಟ್ಟಿದ ಕ್ಷಣ ಅಳುವಿನ ಗಾಯನ ಮುಂದೆ ಅಳು ನಗುವ ಸಮ್ಮಿಲನ ಪ್ರೀತಿಯ ಪ್ರೇಮದ ಸಂಮೋಹನ ಮರಣದ ಬಳಿಕ ನಿರಾಳ ಮೌನ ಶೈಶವದಲ್ಲಿ ಅಮ್ಮನೊಂದಿಗೆ ನಡೆದಾಡುವಾಗ ಬಾ...
ಉಣಲೂ ಇಲ್ಲ ಉಡಲೂ ಇಲ್ಲ ~~~~~~~~~~~~~~~~ ಉಣಲೂ ಇಲ್ಲ ಉಡಲೂ ಇಲ್ಲ ಹಸಿವ ಮರೆಯಲಾಗಲೂ ಇಲ್ಲ ಅದರಿಂದ ನಾನು ಬಡವಾಗಿಹೆನಲ್ಲ ನಿಜಕ್ಕೂ ನಾನು ಬಡವ ಅನಾಥ ಯಾರೋ ತಾಯಿ ಕೊಟ್ಟಳೊಂದು ತಟ್ಟೆ ಇಟ್ಟಳು ಅನ್ನವ ತುಂಬುವಂತೆ ಹೊ...
ಸಿಹಿ ಗಲ್ಲ ೧ ~~~~~~~ ಸಿಗದಲ್ಲ ಆ ಗಲ್ಲ ಸಿಹಿ ಸಿಹಿ ಬೆಲ್ಲ ನಿನ್ನ ಗಲ್ಲದ ಸೆಳೆತಕ್ಕೆ ಸೋತಿಹೆ ನಲ್ಲ ಸಿಗದ ಗಲ್ಲ ನನದಲ್ಲ ಬಾ ಬಾರೋ ನಲ್ಲ ಇದು ನಿನ್ನದೇ ಗಲ್ಲ ಮೆಚ್ಚಿನ ಬೆಲ್ಲ ೨ ~~~~~~~~ ನಿನ್ನದೇ ಗಲ್ಲ ಸೆಳೆಯಿತು ...