ಕರುನಾಡು


ಕರುನಾಡು
~~~~~~

ಕರುನಾಡು ಸಕಲ ಐಸಿರಿಯ ಬೀಡು
ಕರುಣೆಯ ಹೆಸರು ಪಡೆದಿಹ ನಾಡು
ಹಚ್ಚಿದರೆ ಹಸ್ತ ಹೊನ್ನಾಗುವ ನಾಡು
ತಂಗಾಳಿ ಅಲೆಯಲಿ ಶ್ರೀ ಗಂಧದ ಬೀಡು

ಕಂದಾ ಎಂದು ಕರೆವ ಅಮ್ಮನ ನುಡಿ
ಕಂದಗೆ ಅಮ್ಮನ ಮಡಿಲೆ ದೇವರ ಗುಡಿ
ಎನಿತು ಇನಿತಾಗಿಹುದು ನುಡಿ ಕನ್ನಡ 
ಸಾವು ಬಂದರೂ ಸತ್ಯವನೆ ನೀ ನುಡಿ

ಕವಿ ಕೋಗಿಲೆಗಳ ಹಾಡು ನೀಡಿದ ಪಾಡು
ಹರಿವ ತೊರೆಯ ಝುಳು ಝುಳು ಹಾಡು
ಶರದಿಯ ಸಮವುಂಟೆ ಸರಿಯಲಿ‌ ಜಾಡು
ಸಕಲವ ಸವಿದು ಸಿಹಿ ಕನಸಲಿ ಈಜಾಡು

ಜೋಕಾಲಿ ಜೀಕುತಾ ಜೋಗುಳವ ಕೇಳಿ
ಮಗು ಮೈಮರೆತು ನಿಲ್ಲಿಸಿ ತನ್ನೆಲ್ಲಾ ಕೇಲಿ
ಕನ್ನಡದ ರಾಗ ರಂಜನೆಗೆ ತಲೆದೂಗಿ ತಾಲಿ
ಕೈಯಲ್ಲಿ ಹಿಡಿದು ಹೊಡೆಯದಂತೆ ಜೋಲಿ
ಸ್ಥಬ್ದವಾಯಿತು ಚೀರಾಡಿದ ಮನದ ಖೋಲಿ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೦/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು