Posts

Showing posts from February, 2018

ವಚನ ೨೯ ರಿಂದ ೩೧

ವಚನ : ೨೯ ======== ಕೆಂಡಗಣ್ಣಿನ ಪುಂಡರ ನುಡಿಯಾಲಿಸಿ ಕಂಡವರ ಕೂಳಿನಲಿ ಕೆಂಡವನ್ನುಗುಳುವರಯ್ಯ ತಾನೇನೂ ತಿರಿದು ತಂದು ನೀಡಿ ಬಳಿದು ಬಡಿಸಲಸಾಧ್ಯವಾದರೂ ಕಂಡವರೀದ ಕೂಳಿನಲಿ ಕಲ್ಲು ಮಣ್ಣಿನ ಮಳೆಗರೆವರಾ ಕಂಡ...

ನಮ್ಮ ಪಾಲೆಲ್ಲಿ

ನಮ್ಮ ಪಾಲೆಲ್ಲಿ ~~~~~~~~. ಏನೆಂದು  ಹೇಳಲಿ ಏನೆಂದು ಕೇಳಲಿ ಹಸಿವೆಯೇ ಕಾಣಿಸದಾಗಿದೆಯಲ್ಲಾ ಅಮ್ಮನ ನಡುವಲಿ ಸೀರೆ ಜಾರುತ್ತಿದೆ ಅಪ್ಪ ನಿನ್ನ ಮೈಯಲಿ ನೆತ್ತರ್ಹರಿದಿದೆ ಹರಿವ ರಕುತವ ನೋಡೆ ತಲೆ ತಿರುಗಿದೆ. ಜಗ...

ಕರುನಾಡ ಸಿರಿದೇವಿ

ಕರುನಾಡ ಸಿರಿದೇವಿ ~~~~~~~~~~ ಕರುನಾಡ ಸಿರಿದೇವಿ ಕೊಡವರ ಕುಲದೇವಿ ಕವೇರನಾ ಕುವರಿ ಬಾಮ್ಮ ಲೋಕಪಾವನೆ ನೀನೆ ಬಾರಮ್ಮ ||ಪ|| ಮೂರು ಗಿರಿ ನಡುವಿನಲಿ ಮಳು ಮುಳುಗಿ ಮಡುವಿನಲಿ ಮಡಿಯಾಗುವ ಮುನ್ನ ಬಾಮ್ಮ ಕುಂಡಿಕೆಯ ತುಂಬುತಲಿ ಬಾರಮ್ಮ ||೧|| ಮುನಿ ಅಗಸ್ತ್ಯನ ಸತಿಯೆ ಭೂದೇವಿಯ  ಸೊಸೆಯೆ ಭಕ್ತ ಜನರುದ್ದರಿಸೆ ಬಾಮ್ಮ ನಿನಗಾಗಿ ಕಾದಿಹೆವು ಬಾರಮ್ಮ ||೨|| ತ್ರಿವೇಣಿ ಸಂಗಮದಿ ದಂಪತಿಯು ಸಂಭ್ರಮದಿ ಕಾದಿಹರು ನಿನ್ನಯ ಜಲದಿ ಕಾವೇರಿ ಮಾತೆ ದಯೆ ತೋರಮ್ಮ ||೩|| ಸಿಡಿಲು ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೧೩/೧೦/೨೦೧೭

ಶರಣು ಶಂಕರ

ಶರಣು ಶಂಕರ ಶಂಭೋ ಈ ಜಗದ ಜನರೆಂಬೋ ಪಾಪಿಗಳ ಕಾಯೋ ಲಂಭೋ- ಧರ ಪಿತ ಹೇ ಶಿವ ಶಂಭೋ ಓಂ ನಮಃ ಶಿವಾಯ ಶಿವಾಯ ನಮೋ ನಮಃ ಸಕುಟುಂಬ ಪರಿವಾರಕ್ಕೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ವೈಲೇಶ ಪಿ ಯೆಸ್ ಕೊಡಗು

ಪರೀಕ್ಷೆ

ಪರೀಕ್ಷೆ ~~~~ ಪರೀಕ್ಷೆ ಪರೀಕ್ಷೆ ಮಾಡದಿರಿ‌ ನಿರೀಕ್ಷೆ ಎಲ್ಲರ ಮನದಲೂ ಮಾರ್ಕಿನ ಲಕ್ಷೆ ವರುಷದ ಪರೀಕ್ಷೆ ಸೋತರೂ ಕಕ್ಷೆ ಮೀರಲಾರಿರಿ‌ ದೇವನ ಸತ್ವಪರೀಕ್ಷೆ ಜೀವನ ಪರೀಕ್ಷೆಯಲಿರಲಿ ನಿರೀಕ್ಷೆ ಆಗಲೇ ದೊರ...

೨೨ ತೋಟ

೨೨ ತೋಟ ~~~~~~~ ಅಪ್ಪ ನೆಟ್ಟ ಅಸಲಿ ಫಸಲಿನ ತೋಟ ಬೆಲೆ ಏರಿದೊಡೆ ಆಸ್ತಿಯೆಡೆಗೆ ನೋಟ ಜಗಳ ಮುಗಿಸಲು ಎರಡೇ ೨೨ ತೋಟ ಒಂದು ಎದುರಾಳಿಗೆ ಮತ್ತೆ  ಕೊನೆ ಆಟ  ಮನಕೆ ತೋಟಕೆ ಸುತ್ತಿದ ಬೇಲಿಯ ಕಿತ್ತೆಸೆಯಿರಿ ತಿಂದರೆ ತಿ...

ಅಯ್ಯೋ ಜೀವನವೇ

ಅಯ್ಯೋ ಜೀವನವೇ ~~~~~~~~~~~ ಬಾಳು ಸುಬಾಳಗಿದ್ದ ಸಮಯವದು ಕುಟುಂಬದಿ ಕಿರಿ ಸೊಸೆ ನಾನಂದು  ಮಕ್ಕಳು ಮರಿಯಾದಿ ಹಿಂದು ಮುಂದು ನನ್ನವರೋ ಜೊತೆ ಬಿಡದೇ ಎಂದೆಂದೂ ತಿರುಗುತ್ತಿದ್ದರು ಹೂಮುಡಿದ ಜಡೆ ಹಿಡಿದು. ಕಲಿತ ಮಕ...

ಮೊಗವಾಡ

ಮೊಗವಾಡ ~~~~~~~ ಮನುಷ್ಯನ ಮೊಗವೊಂದು ಶಿಲೆಯಂತೆ  ಗುಡಿಯಲ್ಲಿಹ ಶಿಲೆಯೆಲ್ಲವೂ ದೇವರಂತೆ  ನಗುನಗುತಿಹ ಮೊಗವದು ಮೊದಲಂತೆ  ಒಳಗೊಳಗೇ ಅಡಗಿಹಿದು ಅರಿಯದಂತೆ ಮತ್ತೊಂದು ಮೊಗವಿದೆ ನಿಜವಂತೆ ನಗುವನ್ನೇ ಮುಖ...

ಆಳ್ವಾಸ್

                           ದಿನಾಂಕ ೨೪/೨/೨೦೧೮ ಶನಿವಾರದಂದು ಅಳ್ವಾಸ್ ನುಡಿಸಿರಿ ಕೊಡಗು ಘಟಕ  . ಇವರ ವತಿಯಿಂದ ನಡೆದ ನೂತನ ಘಟಕದ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಆಳ್ವಾಸ್ ಸಾಂಸ್ಕೃತಿಕ ವೈಭವ ನಿ...

ನಮಿಸಿ

ಹಗಲು ಬೆಳಗಲು ರವಿ ನಿಶೆಯ ಕಳೆಯಲು ಶಶಿ ಇವರಿಲ್ಲದಿರೆ ಜಗವೇ ಮಸಿ ಎಲ್ಲರೂ ತಲೆಬಾಗೀ ನಮಿಸಿ  ವೈಲೇಶ ಪಿ ಯೆಸ್ ಕೊಡಗು 25/2/2017

ಅಜ್ಜಿ

ಅಜ್ಜ ಅಜ್ಜಿ  ಬೆನ್ನು ಬಾಗಿ ತುಂಬು ಬದುಕದು ಮಾಗಿ ಬಾಳ ಪಯಣ ಹಸನಾಗಿ ವಿಧಿಯೆದುರು ತಲೆಬಾಗಿ ಮಕ್ಕಳು ಮುಂದೆ ಸಾಗಿ ಮೊಮ್ಮಕ್ಕಳಿಗೆ ಆಗದಿರಲೆಂದು ಒಜ್ಜೆ ಇಳಿವಯಸ್ಸಿನ ಸ್ವಾಭಿಮಾನಿ ಅಜ್ಜ ಅಜ್ಜಿ ಬದುಕ...

ಜಗದ ಕಾರಣ

ಮೂಡಲೂರಿನ ರವಿ ಕಂಡಂತೆ ಕವಿ ರವಿ ಕಾಣದ್ದು ಕವಿ ಕಂಡನೆಂಬುವರು ನಿತ್ಯ ರವಿ ಬಾರದಿರೆ ಕವಿಕಿವಿಗಳೆಲ್ಲಿಹರು ರವಿತೇಜದಲ್ಲಡಗಿಹುದು ಚರಾಚರ ತವರು ಅನುದಿನವು ಪಥವ ಬಿಡದ ರವಿ ಹೊಸ ಜೀವ ಹೊಸ ಭಾವ ಜಡಚೇತನಕ...

ಗಝ಼ಲ್ : ೧೮

ಸ್ಪರ್ಧೆಗಾಗಿ ಗಝಲ್ : ೧೮ ~~~~~~~~ ಎಲ್ಲಾ ಮುಗಿದು ಹೋದ ಮೇಲೆ ನ್ಯಾಯಾಲಯದ ತೀರ್ಪು ಬಂದಿದೆ. ಇನ್ನಾದರೂ ನಾವು ನೀರಿನ ವಿಚಾರದಲಿ ಮುನ್ನೆಚ್ಚರಿಕೆ ಮಾಡಬೇಕಿದೆ. ರೈತರ ಆರ್ಥಿಕ ಪರಿಸ್ಥಿತಿ ಯಾಕೋ ಯಡವಟ್ಟಾಗಿದೆ ...

ಮೊಣಕೈ ತಬ್ಬಿದವರು

ಮೊಣಕೈ ತಬ್ಬಿದವರು ~~~~~~~~~~~ ಎಲ್ಲಿಂದಲೋ ಪಯಣ ಬಂದವರು ಮತ್ತೆ ಎತ್ತಲೋ ಹೊರಟು ಕಾಯ್ವರು ಮಧ್ಯೆ ಮಲಗಿ ನಿದ್ರಿಸುತ್ತಿರುವವರು ಮನೆ ಮಠ ಇಲ್ಲದವರೂ, ಸಕಲವೂ ಇದ್ದು ಬೆಳಸಿ ಬಳಸಿಕೊಳ್ಳಲಾರದವರು ತುತ್ತು ತುಂಬಲ...

ಹಬ್ಬ

ಹಬ್ಬ ======= ವರುಷಕ್ಕೊಮ್ಮೆ ಬರುವ ಹಬ್ಬ ಶಿವನ ಭಕ್ತಿಯಿಂದ ಪೂಜಿಸುವ ಹಬ್ಬ ವರ್ಷಾದ್ಯಂತ ನಮ್ಮ ಕಾಯ್ದು ವಿರಾಮಕ್ಕಾಗಿ ಮಲಗಿದ ಶಿವನನ್ನು ನಾವು ಕಾಯುವ ಹಬ್ಬ ಜಾಗರಣೆ ನೆಪದಿ ಪುಂಡಾಟದ ಹಬ್ಬ ಮತ್ತೆ ಜೂಜುಕ...

ಬರಲಿ ಮಳೆ

ಮಳೆ ಕರೆದಿದೆ ಇಳೆ ಕಳೆಯಲು ಕೊಳೆ ಕಲ್ಯಾಣ ಮಂಟಪದ ಸುತ್ತಮುತ್ತ ಒಂದು ಕೈಯಲ್ಲಿ ಮೂಗು ಇನ್ನೊಂದು ಕೈಯಲ್ಲಿ ಸ್ಟೇರಿಂಗು ಮಳೆಯಿಲ್ಲದೇ ಊರ ಮೋರಿಯಾ ತುಂಬ ನಿಂತ ನೀರಿಗೆ ಸೊಳ್ಳೆ ತತ್ತಿ ಇಟ್ಟು ಮೈಕೈ ತುಂಬ...

ಮುಗಿಲ ಮೌನ

ಮುಗಿಲ ಮೌನ ~~~~~~~~~ ಕತ್ತಲ ರಾತ್ರಿಯ ಅಗಾಧ ಮೌನ ಅವನಿಲ್ಲದ ನೆನಪುಗಳ ಗಾನ. ಚಳಿಯ ಬಳುವಳಿ ಹೇಳಲೇನ ಕಂಬಳಿಯೇ ಹೇಳಿದೆ ಗಾಯನ ನಿನ್ನ ಬಿಟ್ಟಿರಲಾರೆನು ನಾ  ಮುಂಜಾನೆಯ ಮಂಜಿನಲಿ ನಡಿಗೆ ಸುತ್ತಿದಾ ಮಫ್ಲರ್ ಮಂಕಿ ಟೋಪಿಯ ಸಂದಿಯಲಿ ಉಸಿರ ಮೊರೆತದ ಹೊರತು ಬರೀ ಮೌನ ದೂರದಿ ಎಲ್ಲೋ ಶ್ವಾನ ಗಾಯನ ಮುಂಜಾನೆಯ ನಡಿಗೆಯ ಹೆಜ್ಜೆ ಸಪ್ಪಳ ಹಕ್ಕಿಗಳಿಂಚರ ಹರಿದಾಡುವ ವಾಹನ ಮೊರೆತ ಮರೆತ ಭಾವಲಹರಿಗೆ ಮನ ನುಗ್ಗುವ ತುಡಿತ ಇವಾವುದಕ್ಕೂ ಸ್ಪಂದಿಸದ ನೊಂದು ಬೆಂದ ಮನ ಮೌನ ಸಂತೆಯಲಿ ನಿಂತ ಸಂತ ತನ್ನ ಸುತ್ತ ಇರಲಿಲ್ಲವನ ಚಿತ್ತ ಚಿತ್ತ ದೈವ ನಾಮ ಸ್ಮರಣೆಯತ್ತ ಸಂತೆಯಲ್ಲಿದ್ದರೂ ಪಕೀರನ ಮನ ಪರಕೀಯ ಪರಮ ಮೌನ. ಮುಂಗಾರಿಗೂ ಮುನ್ನ ಮುಗಿಲ  ಗುಡುಗು ಮಿಂಚಿನ ಆರ್ಭಟ ಮುಗಿಲ ಆರ್ಭಟಕ್ಕೆ ಬೆದರಿ ಸೂರ್ಯನ ತಾತ್ಕಾಲಿಕ ಮೌನ ಮೋಡ ಚದುರಿದ ಬಳಿಕ ಮುಗಿಲ ದಿವ್ಯ ಮೌನ ಮಳೆಗಾಲದಿ ಅದಿತ್ಯನ ಅಸಹನೀಯ ಮೌನ ವೈಲೇಶ ಪಿ ಯೆಸ್ ಕೊಡಗು 21/2/2017

ಪಂಚತಾರಾ ಅತಿಥಿ ಗೃಹ

ಪಂಚತಾರ ಅತಿಥಿ ಗೃಹ ~~~~~~~~~~~~ ಕೋಟಿ ಕೋಟಿ ಬೆಲೆ ಬಾಳುವ ಪಂಚತಾರಾ ಅತಿಥಿ ಗೃಹ ಇಲ್ಲಿತ್ತು ಇಲ್ಲಿಯೇ ಇತ್ತು.ಅಲ್ಲಿಯೂ ಇತ್ತು ಹಿಂದೆ ಅಲ್ಲಲ್ಲಿ ಅದೇ ತುಂಬಿತ್ತು. ಪಾಪ ನಿಮಗೆಲ್ಲಾ ತಿಳಿದಿತ್ತು. ತಿಳಿದೂ ಇದೆ. ಅ...

ತರ್'ಹೀ ಗಝ಼ಲ್ : ೧೬

ತರ್'ಹೀ ಗಝ಼ಲ್ : ೧೬ ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು ಕವಿ ಗೋವಿಂದನ ಹೆಗಡೆಯವರ ಗಝ಼ಲ್'ನಿಂದ ಮತ್ಲಾವನ್ನು ಪಡೆದಿದ್ದೇನೆ ಬಿತ್ತವದು ಮೊಳಕೆಯಾ...

ಚಳಿಚಳಿ

ಚಳಿಚಳಿ ~~~~~ ಚುಮುಚುಮು ಚಳಿಯಲ್ಲಿ ಅರೆಬರೆ ನಿದಿರೆಯಲಿ ಪಕ್ಕದಲ್ಲಿ ಕೈಚಾಚಿ ತಡಕಾಡಿದಂತಿಲ್ಲಿ ಅವಳಿರುವಳು ಊರಿನಲ್ಲಿ ನಾನೊಬ್ಬನೇ ಡಬಲ್ ಕಾಟಿನಲ್ಲಿ ಕರೀ ಕಂಬಳಿಯೇ ಜೊತೆಯಲ್ಲಿ ಜಾಗರಣೆ ಒಂದೇ ಕಣ್ಣ...

ಟಿಬೇಟಿಯನ್

ಮಳೆಯಿಲ್ಲ ಬೆಳೆಯಿಲ್ಲ ನಾಡಿನ ಜನರೆಲ್ಲ ಗುಳೆ ಹೊರಡುವ ಪರಿಸ್ಥಿತಿ ಊರ ತುಂಬಾ ರಾಜ್ಯದ ತುಂಬ ಯಾಕೆ ದೇಶದ ತುಂಬಾ ಬರಗಾಲದ ಛಾಯೆ. ಅಸ್ಸಾಮಿಗರ ಹೆಸರಲ್ಲಿ ಬಾಂಗ್ಲಾದೇಶೀಯರ ಆಗಮನ ನಮ್ಮ ಹಕ್ಕಿನ ಉದ್ಯೋಗ ನ...

ಹುಚ್ಚು ಮನಸ್ಸು

ಹುಚ್ಚು ಮನಸ್ಸು ~~~~~~~~~ ಮನಸ್ಸೆಂಬುದು ಹುಚ್ಚು ಹೊಳೆ ಒಮ್ಮೊಮ್ಮೆ ಹುಚ್ಚೆದ್ದ ಬಿರುಮಳೆ ಮಗದೊಮ್ಮೆ ಸುರಿವ ಸೋನೆ ತೋಟದಿ ಬಾಗಿದ ಬಾಳೆಗೊನೆ ಸೆಟೆದು ನಿಂತರೆ ಕಲ್ಲಿನ ಮೊನೆ ನೋವು ಕೊಟ್ಟರೆ ನೋವನ್ನೇ ಕೊಡು...

ಗಝ಼ಲ್ : ೧೫

ಗಝ಼ಲ್ : ೧೫ ~~~~~~~~ ಮನವೇ ನಿನ್ನೊಲವ ಸವಿ ಭಾವಗಳು ಏನೆಂಬುದು ಗೊತ್ತಿರಲಿಲ್ಲ. ತನುವ ಮೋಹಿಸಿ ಮೋಸ  ಮಾಡುವೆಯೆಂಬುದು ಗೊತ್ತಿರಲಿಲ್ಲ.  ಜಗದೊಳಗೆ ಮೋಸ ಕಪಟ ದುರುಳತನ ತುಂಬಿ‌ ತುಳುಕುತಿದೆ ನಿಜ. ಹೂವಿನಂತಹ ಪ್...

ನಗುಮೊಗ

ನಗು ಮೊಗ ~~~~~~~ ಮುಳುಗಿರಲಿ ಮಿಗಿಲಿರಲಿ ಸುಖ ದುಃಖವು ಸುರಿದಿರಲಿ ಬಯಕೆಯ ಭವ್ಯ ಬಸಿರಿರಲಿ ತನುಮನವ ಒಡೆವ ನೋವಿರಲಿ  ತನ್ನ ತಾ ಮರೆತಿರಲಿ‌ ಇತರರೊಳು ಬೆರೆತಿರಲಿ ಜನಜಂಗುಳಿಯಲಿ ಜರಿದಿರಲಿ ಏಕಾಂತದೊಳು‌ ...