Posts

Showing posts from October, 2019

ಕಲಿಸಿನೋಡಿ ಮಾತೃಭಾಷೆ

ಕಲಿಸಿನೋಡಿ ಮಾತೃಭಾಷೆ ~~~~~~~~~~~~~~ ಹೋರಾಟ ಬೇಕಿಲ್ಲ ಹಾರಾಟ ಸರಿಯಲ್ಲ ಚೀರಾಟ ನಮಗಲ್ಲ ಭಾಷೆಗಾಗಿ ಬೇರೇನು ಮಾಡದೆಲೆ ದಾರಾಳತನದಲ್ಲಿ ನೂರಾರು ಜನರಿಂಗೆ ಕಲಿಸಿನೋಡಿ  ಕೆಲಸವನು ಹುಡುಕುತ್ತ  ನಲಿನಲಿದು ಬರುವವಗೆ ಕಲಿಸುವುದು ಕನ್ನಡವ ಬಹಳ ಸುಲಭ ನುಲಿಯುತಲಿ ಪರಭಾಷೆ  ಸುಲಿಯುತಿದೆ ನೋಡಿದಿರ ಬಲಿಯಾಗಬೇಕೇನು ನಮ್ಮ ಭಾಷೆ  ಅಳಿಯುತಿದೆಯೆನ್ನದೆಲೆ  ಬಳಸುವುದ ಮರೆಯದಿರಿ ಕಳಿತಿರುವ ಕಲಿಗಳೇ ನೀವದೆಂದು ಕಳೆಯಂತೆ ಕಾಣುತಲಿ ಬೆಲೆಯನ್ನು ನೀಡದೆಲೆ  ಕೊಲೆಯನ್ನು ಮಾಡದಿರಿ ಮಾತೃಭಾಷೆ  ಆಡುತಿಹ ಮಾತಿನಲಿ  ನೋಡುತಿಹ ನೋಟದಲಿ ಮಾಡುತಿಹ ಕಾಯಕದಿ ತಾಯನೋಡಿ  ಕೂಡಿಬಾಳಲು ನಾವು  ಕಾಡುವುದು ನಡೆಯುವುದೆ ಬೇಡುವುದು ಬರದೆಂದು ಭಾಷೆಗಾಗಿ ಪಶಿವೈ ಪಿ ಎಸ್ ವೈಲೇಶ ಕೊಡಗು ೧/೧೧/೨೦೧೯

ಹುಟ್ಟಲು ಕಷ್ಟವಿದೆ

ಹುಟ್ಟಲು ಕಷ್ಟವಿದೆ ಮೆಟ್ಟದೇ ಮೋಡಗಳ ತಟ್ಟಿಬಿಡೊ ಕೋಪವಿದೆ ತಾರೆಗಳಲಿ ಮುಟ್ಟಲಾರದೆ ಹೋದ್ರು ಗಟ್ಟಿಯಾಗೊಮ್ಮೆ ಕಣ್ ಕಟ್ಟಬಾರದೆ ಹಣತೆ ಬೊಮ್ಮಲಿಂಗ  ಮಾಡಿನೊಳ ನಕ್ಷತ್ರ ಮೂಡುವುದ ನೋಡಿಬಿಡೆ ಜಾಡು ಹಿಡಿಯಲು ಬಿಡದು ಮೋಡನೋಡಿ ಕೋಡು ಬಂದಂತೆ  ಪಾಡು ಕೆಡಿಸುತ್ತಿದೆಯೆ  ಹಾಡುತ್ತ ಸುರಿವಮಳೆ ಬೊಮ್ಮಲಿಂಗ  ಬೆಚ್ಚದಿರಿ ಮಳೆಗೆಂದು  ಹೊಚ್ಚುತಿದೆ ಕಳೆದುದನು ಬೆಚ್ಚನೆಯ ಹೊದಿಕೆಯನು ಹೊದ್ದು ಮಲಗಿ   ನಿಚ್ಚಳದಿ ಮಳೆಸುರಿದು ಪಚ್ಚೆಗಿದು ಕಳೆ ನೀಡಿ  ಹೆಚ್ಚಿಸುವ ಕಾಯಕವು ಬೊಮ್ಮಲಿಂಗ ಹಚ್ಚಿಬಿಡಿ ಹಣತೆಗಳ  ಕೆಚ್ಚೆದೆಯ ನುಡಿಯಿರಲಿ  ಹಚ್ಚಲಾರೆವು ನಾವು ಮದ್ದು ಬತ್ತಿ ಕಚ್ಚಲಾರದ ಜೀವ ಪೆಚ್ಚು ಮೋರೆಯ ತೋರಿ ಪಿಚ್ಚೆಂದು ಮಡಿಯುತಿವೆ ಬೊಮ್ಮಲಿಂಗ

ಹಣತೆ ಹಚ್ಚೋಣ ಬನ್ನಿ

ಹಣತೆ ಹಚ್ಚೋಣ‌‌ ಬನ್ನಿ ~~~~~~~~~~~~ ದೀಪಾವಳಿ ಬಗ್ಗೆ ಲೇಖನ ಬರೆಯಬೇಕು ಏನೆಂದು ಬರೆಯಲಿ.‌ ಕಳೆದೆರಡು ವರ್ಷಗಳಲ್ಲಿ ಮನೆಗೆ ದುಡಿದು ತಂದು ಸಂಸಾರದ ಜವಾಬ್ದಾರಿ ಹೊತ್ತಿದ್ದ ಮನೆಯ ಯಜಮಾನನನ್ನು ಕಳೆದುಕೊಂಡ ನಂತರ ಮನೆಯ ನಿತ್ಯದ ದೇವರ ದೀಪ ಹಚ್ಚಲು ಎಣ್ಣೆ ಬತ್ತಿ ಇರದ ಮನೆ ಮನಗಳ ಕಷ್ಟವನ್ನು ಬರೆಯಲೇ?. ದೇಶದ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ದಿವಾಳಿತನವನ್ನು ಕಂಡು ಸಂಭ್ರಮಿಸುತ್ತಾ ಕೋಟಿ ಕೋಟಿ ಲೂಟಿಗೈದ ಮೇಟಿಗಳು ಜೈಲುವಾಸ ಅನುಭವಿಸಿ ಹೊರಬಂದ ನಂತರ ತಲೆಯ ಮೇಲೆ ಹೊತ್ತು ಹೊಗಳುವ ಆ ಮೂಲಕ ಏನಾದರೂ ಸಿಗಬಹುದು ಎಂಬಾಸೆ ಹೊತ್ತ ನಮ್ಮದೇ ಬಂಧುಗಳ ಹೀನ ಸ್ಥಿತಿಯನ್ನು ಕಂಡು ಮನಕ್ಕೆ ತೋರಿದ ಅಳಲು ನೋಡಿಕೊಳ್ಳಲೇ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಸಮಯ ಮಳೆ ಬರುವುದೋ ಇಲ್ಲವೋ ಎಂಬುದನ್ನು ತಿಳಿಸುವ ಹವಾಮಾನ ಇಲಾಖೆಯ ಕಾರ್ಯವೈಖರಿಯನ್ನು ಏನೆಂದು ಬಣ್ಣಿಸಲಿ. ಬೆಳಗೆದ್ದು ನಮ್ಮ ಮನ ಸಂತೋಷಗೊಳಿಸುವ ಜ್ಯೋತಿಷ್ಯಿಗಳನ್ನು ಹಾಡಿ ಹೊಗಳಲೇ ನೀವೇ ಹೇಳಿ.  ಕಾಲವನ್ನು ತಡೆಯೋರು ಯಾರೂ ಇಲ್ಲ. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ. ರೇಡಿಯೋ ತನ್ನ ಪಾಡಿಗೆ ತಾನು ಹಾಡುತ್ತಿದೆ ಯಾರು ಕೇಳಲಿ ಬಿಡಲಿ ಬ್ಯಾಟರಿ ಮುಗಿಯುವವರೆಗೂ ಅಥವಾ ಅದನ್ನು ನಿಲ್ಲಿಸುವವರೆಗೂ.ಹೌದು ನಿನ್ನೆ ಮೊನ್ನೆಯಂತೆ ಇದೆ ಜನವರಿ ೨೦೧೯ ರಂದು ಹೊಸವರ್ಷದ ಸಂತಸವನ್ನು ಹಂಚಿಕೊಂಡ ಸಂಭ್ರಮ. ಇಂದಾಗಲೇ ದೀಪಾವಳಿ ಕಣ್ಣೆದುರು ನಿಂತಿದೆ. ಈಗಾಗಲೇ ಪಟಾಕಿಗಳ ಅಂಗಡಿಯಲ್ಲಿ ಪಟಾಕಿ ಪ್ರ...

ಗಝಲ್

ಮುಖಕಮಲ ಕಾಣದಿದ್ದರೂ ಸರಿಯೇ ಹೊಗಳುತಿಹರು ನೋಡು ಸಖಿ ಮುಖಾಮುಖಿಯಾದರೂ ಗುರುತು ಹಿಡಿಯಲಾರರಿವರು ನೋಡು ಸಖಿ ನಿನ್ನದೊಂದು ಮುಖಧರೆಯ ಚಿತ್ರಕ್ಕೆ ಸಾವಿರಗಟ್ಟಲೇ ಲೈಕು ಕಾಮೆಂಟು ಹೊನ್ನಿನಂತ  ಸುವಿಚಾರ ಮಂಡನೆಯೆಡೆ ತಿರುಗಿ ನೋಡರು ನೋಡು ಸಖಿ ಅಂಗಾಂಗ ಹೊಗಳುತ ಮಂಗಗಳಂತಾಡುವರ ಒಳಗಿಣುಕ ಬಿಡುವೆಯೇನು ಸಂಗಸುಖವ ದೋಚುವರೆ ಸಾಲುಗಟ್ಟಿ ನಿಂತಿರುವರಿಲ್ಲಿಹರು ನೋಡು ಸಖಿ ಒಳಪೆಟ್ಟಿಗೆಯ ಒಳ ಪೆಟ್ಟಿಗೆ ಒಳತೋಟಿಯದು ಹೊರಗಿಡಲಾಗದೇ ಕೊರಗಿದೆ ತಳ ಒಡೆದ ದೋಣಿಯಲಿ ನಿಂದು ದ್ವಿ ನಾವೆಯೊಳು ಸಾಗಿಹರು ನೋಡು ಸಖಿ  ಅತ್ತ ಇತ್ತ ನೋಡಿ ತತ್ತಿಯಿಡುವ ಕೋಗಿಲೆಯ ರಾಗಗಳಿಗೆ ಪ್ರಶಸ್ತಿಗಳಿವೆ ಕೇಳು  ಚಿತ್ತದೊಳಗಿಹ ತತ್ತಿಯ ಭಿತ್ತಿಗೊಳಿಸಿದೊಡೆ ಕತ್ತಿಯಂತಾಡುವರು ನೋಡು ಸಖಿ ಕಂಡುದು ಕಂಡ ಹಾಗೆ ನುಡಿಯುವುದು ಸಿಡಿಲನ ಮಾತಿನ ಮರ್ಮವೆಂಬೆನು ಕೆಂಡದಂತಾಡಿ ಕಂಡವರ ಕರೆದು ಬರಿದೇ ಕೆರಳಿ ಬರುತಿಹರು ನೋಡು ಸಖಿ.

ಗಝಲ್

ಗಝಲ್  ಸ್ವಂತ ಏಳಿಗೆಗಾಗಿ ಜಂತರ್ ಮಂತರ್ ಮಾಡುವರು ಸಖ ಅನ್ಯರೇಳಿಗೆಯ ಕಂಡು ಕುಂತು ನಿಂತು ಕೊರಗುವರು ಸಖ ಸ್ವ ಸಾಧನೆಗಳನು ಹೊಗಳಿಕೊಳ್ಳುವುದೇ ಹೆಮ್ಮೆಯಾಗಿದೆ  ಸಾಧಕರ ಚಿಂತನೆಯನು ಕಂತಿಸಿಲೆಂದು ಮರುಗುವರು ಸಖ  ಎಂದೋ ಕಡಿದು ಕಟ್ಟೆ ಹಾಕಿದುದು ಇಂದು ಕಣ್ಮರೆಯಾಗಿದೆ ಹಿಂದೆ ಬೀಳುವೆನೆಂಬ ಭಯದಿಂದ ಕಾಲೆಳೆಯುತಿಹರು ಸಖ ಹೆಗ್ಗಳಿಕೆಯ ಹೆಗ್ಗುರುತು ಮಾಸಿ ಮುಕ್ಕಾಗಿರುತ್ತದೆ ನೋಡು ಅಗ್ಗದ ಮಾತಿಂದಲಿ ಸಗ್ಗವನು ತಂದು ನಿಲ್ಲಿಪೆನೆಂಬರು ಸಖ  ತಗ್ಗಿದ ಧನಿಯೊಳಗೆ ಉಗ್ಗುವ ಮಾತುಗಳು ಸಿಡಿಲನ ಆಸ್ತಿ ಕುಗ್ಗಿಸಲು ಬಗ್ಗು ಬಡಿಯುವ ಜನರ ನೀ ನೋಡುತಿರು ಸಖ  ಸಿಡಿಲ (ಪಶಿವೈ) ಪಿ ಎಸ್ ವೈಲೇಶ ಕೊಡಗು ೨೪/೧೦/೨೦೧೯

ಚೋರ ಗುರು

ನೂರು ತಪ್ಪುಗಳ ಜೊತೆ ದಾರಿಯನು ಸವೆಸುತಿಹ  ಮೂರು ಬಿಟ್ಟವರಿಲ್ಲಿ ಹಿರಿಯರೆನಿಸೆ ಚೋರ ಗುರುವಿನ ಮನೆಯ ಸೂರು ಕುಸಿಯುವ ಸಮಯ  ದೂರವಿರದೆಂಬುವೆನು ಬೊಮ್ಮಲಿಂಗ. 

ಬೊಮ್ಮಲಿಂಗ

ಜನಕನನು ನೆನೆಯುತಲಿ ಕನವರಿಸಿ ಸತಿಮಣಿಯು ಧನಕನಕ ಬೇಡೆನಗೆ ತವರು ಬೇಕು ಎನುತಿರಲು ಪತಿರಾಯ ಜನನಿಯಿರೆ ಮನೆಹಿರಿದು ತನುಜೆಯಂತ್ಹೋಗಿ ಬಾರೆಂದನವನು  ಬಣ್ಣದಲಿ ಗಣಪತಿಗೆ ಸುಣ್ಣವನು ಬೆರೆಸುತಲಿ ಗಿಣ್ಣದಂತೆ ಮೆತ್ತಿಹರು ಕಾಣಿರೀಗ ಎಣ್ಣೆಯನು ಹಚ್ಚಿದರು ಕಣ್ಣಿನಲಿ ಕಾಣದಿಹ ಮಣ್ಣಿನಾ ಗಜಮುಖನು ಬೊಮ್ಮಲಿಂಗ ಪರಿಸರವನುಳಿಸುವರೆ ಪರಿಕರವು ಸಾಸಿರವು ಸರಿಕರೊಡಗೂಡುತ ಜಗವತಡಕೆ ಧರೆಯೊಳಗ ತಪ್ಪುಗಳ ಸರಿಪಡಿಸಿ ನಡೆಯುತಿರೆ ಮೆರೆಯುವುದು ಮನುಜಕುಲ ಬೊಮ್ಮಲಿಂಗ ಬಣ್ಣವದು ಮಾರಕವು ಸುಣ್ಣದಲಿ ಮಿಂದಂತೆ ಕಣ್ಣಿಗರಿಯದೆ ಜೀವ ನರಳಿಸುತವೆ ಸಣ್ಣದಾದರು ಸರಿಯೆ ಮಣ್ಣಿನಿಂ ಹೊಳೆಯುತಿಹ ಬೆಣ್ಣೆ ಗಣಪನ ತಂದು ಕೂರಿಸೋಣ ಒಲವ ತೋರುವ ಗೆಳತಿ ಬಲವ ತೋರುವೆಯೇಕೆ ಸಲುಗೆಯಲಿ ನುಲಿದಿದ್ದ ಚೆಲುವೆ ನೀನು ಕಿಲಕಿಲನೆ ನಗುತಿದ್ದ ಲಲನಾಮಣಿಯೆ ಕೇಳು  ಗೆಲುವು ನಿನದಾಗಿರಲಿ ಬೊಮ್ಮಲಿಂಗ ಬಳ್ಳಿಯೊಲು ಬಳುಕಿದ್ದ ಮಳ್ಳಿ ಗೆಳತಿಯೆ ಹೇಳು  ಸುಳ್ಳು ಸುಳ್ಳೇ ನರಳಿ ಕೊರಗಲೇಕೆ  ಕಳ್ಳಮನ ತುಡಿಯುತಿದೆ ರೊಳ್ಳೆಯನು ತೆರೆಯುತಿದೆ ಬಳ್ಳ ಬೇಡಿಕೆಯೇಕೆ ಬೊಮ್ಮಲಿಂಗ   ಹೆಣ್ಣು ಮಕ್ಕಳ ಕಂಡು ಹುಣ್ಣೆಂದು ಜರಿಯದಿರಿ ಹಣ್ಣೆಂದು ನಿಮ್ಮೊಳಗೆ ತಿಳಿದುಕೊಳ್ಳಿ ಅಣ್ಣತಮ್ಮರೆ ಕೇಳಿ ಬೆಣ್ಣೆ ಮಾತಿನ ಚೆಲುವೆ ಕಣ್ಣು ಸಂಸಾರದಲಿ ಬೊಮ್ಮಲಿಂಗ ಮುಕ್ತಕ ಕುಸುಮ ಮುಕ್ತಕ ಜನನಿಯನು ನೆನೆದೊಡನೆ ‌ಕನಲಿಹೋದಳು ತನುಜೆ  ತನುವ ಕಸುವನ್ನೆಲ್ಲ ಕಳ...

ಮಾನವ ಮಿತ್ರ ಜೇನ್ನೊಣಗಳು

ಮಾನವ ಮಿತ್ರ ಜೇನ್ನೊಣಗಳು ~~~~~~~~~~~~~~~~ "ಎಲ್ಲ ಕೆಲಸವನ್ನು ನಾನೊಬ್ಬನೇ ಮಾಡಬಲ್ಲೆ" ಎನ್ನುವ ಮಾತುಗಳು ಅಪ್ಪಟ ಸುಳ್ಳು ಅಲ್ವೇ. ಯಾವುದೇ ಕೆಲಸವನ್ನು ಮಾಡಬೇಕಾದರೂ ಮತ್ತೊಬ್ಬರ ಸಹಾಯ ಬೇಕೇ ಬೇಕು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಜಗತ್ತಿನಲ್ಲಿ ಹಲವಾರು ಪ್ರಕ್ರಿಯೆಗಳು ನಮಗರಿವಿಲ್ಲದೇ ನಡೆಯುತ್ತಿವೆ ಅಷ್ಟೇಕೆ ನಾವು ಕೂಡ ನಮಗರಿವಿಲ್ಲದೇ ಪ್ರಕೃತಿಯ ಉನ್ನತಿಗೆ ಕಾರಣವಾಗಿರುತ್ತೇವೆ. ನಾವು ನಡೆವ ಹಾದಿಯಲ್ಲಿ ನಮ್ಮ ಪಾದದ ಸ್ಪರ್ಶದಿಂದ ಒಂದಷ್ಟು ಸಾವು ಒಂದಷ್ಟು ಹುಟ್ಟಿಗೆ ಕಾರಣವಾಗಬಹುದು ಮತ್ತು ಅದು ನಮ್ಮ ಕಣ್ಣಿಗೆ ಕಾಣದೇ ಇರಬಹುದು. ಅದು ಸೂಕ್ಷಜೀವಿಗಳ ರೂಪಾಂತರ ಇರಬಹುದು ಬಹುಗಾತ್ರ ಜೀವಿಗಳ ಇನ್ನೇನೋ ಆಗಬಹುದು. ಉದಾಹರಣೆಗೆ ನಾವೆಲ್ಲರೂ ಚಪ್ಪರಿಸಿ ತಿನ್ನುವ ಸಿಹಿಯಾದ ಜೇನಿನ ಬಗ್ಗೆ ಆಲೋಚಿಸುವ ಬನ್ನಿ. ನಿಮಗೆ ಗೊತ್ತೇ ಇದೆ ಬಿಡಿ ಜೇನುನೊಣಗಳ ಸಂಘಟನೆಯ ಬಗ್ಗೆ ಅವುಗಳ ಕೆಲಸಕಾರ್ಯಗಳ ಬಗ್ಗೆ ನಾವೆಲ್ಲರೂ ಪ್ರಾಥಮಿಕ ಶಾಲಾ ಶಿಕ್ಷಣದ ಸಮಯದಲ್ಲಿಯೇ ತಿಳಿದುಕೊಂಡಿದ್ದೇವೆ. ಆದರೂ ಮರೆತಿರುವ ಕೆಲವು ವಿಚಾರಗಳನ್ನು ಮತ್ತೆ ಮೆಲುಕು ಹಾಕಿ  ಕುಲು ಕುಲು‌ ನಕ್ಕು ಮತ್ತೊಮ್ಮೆ ಜೇನನ್ನು ಚಪ್ಪರಿಸಿಬಿಡುವ ಜೊತೆಗೂಡಿ.ಜೇನುನೊಣಗಳಲ್ಲಿ ಹಲವು ವಿಧಗಳಿವೆ ಹಾಗೆಯೇ ಜೇನಿನ ರುಚಿ ಕೂಡ ಹಲವು ವಿಧಗಳಲ್ಲಿ ಇರುತ್ತವೆ. ಅದರ ಕಾರಣಗಳನ್ನು ಹುಡುಕುವ ಮುನ್ನ. ಈ ಜಗತ್ತನ್ನು ಸೃಷ್ಟಿಸಿದವರು ಯಾರೇ ಆಗಿರಲಿ ಅದರ ಬಗ್ಗೆ ಜನರು ತಲಾ ನ...

ಮನುಕುಲಕೆ ಭಾಮಿನಿ ಷಟ್ಪದಿ

ಮಳೆಯು ಸುರಿಯದೆಲೆ ~~~~~~~~~~~~~ ಸರಿವ ಬುದ್ಧಿಯ ಮೆರೆವ ಜನಗಳೆ ತರಿದು ಮರವನು ಮಾರಿ ಜೀವಿಸೆ ನರರು ಬದುಕಲು ವಾಯು ಸೇವನೆಗೇನು ಮಾಡುವಿರಿ ಬರಿದು ಮಾಡುತ ವನವ ಮಾನವ ಬರಿದೆ ಹೊಗಳುವ ನುಡಿಗೆ ದೇವನು ಬಿರಿದ ಹೂಗಳ ತೆರದಿ ನಿಮ್ಮನು ತೆಗೆದು ಮಡುಗುವನೆ ಕಾಣದಾಗಿದೆ ಯಾವ ತಿನಿಸದು ಕಾನನದೊಳಗ ನೀರು ಮಾಯವೆ ಬೇನೆ ತುಂಬಿದ ಬಾಳು ನಮ್ಮದು ಬೇಡವಾಗಿಹುದು ಮಾನವಂತರೆ ನೀವು ಕೇಳಿರಿ ನಾನುತನವನು ಬಿಟ್ಟು ನಡೆಯುತ ಕಾನನದಳಿದುಳಿದಿಹ ಜೀವಿಗೆ ರಕ್ಷೆಯಾಗುವಿರೆ ತಾನು ಒಣಗುತ ಕೆರೆಯು ನಲುಗಿದೆ ಭಾನು ತಂದಿಹ ಬಿಸಿಲಿನಂದಕ- ದೇನು ಮಾಡಲು ತಂಪು ಬರುವುದೊ ಕಾಣದಾಗಿಹುದು ಜೇನು ನೊಣಗಳು ಹಸಿದು ನಿಂತಿವೆ ತಾನ ಕಾಣದೆ ಹೂವ ಬನದಲಿ ಬಾನಿನೆಡೆಯಲಿ ಮೋಡ ಕರಗಿಸಿ ಮಳೆಯು ಸುರಿಯದೆಲೆ ಬಲ್ಲ ದೇವನದೆಲ್ಲಿ ಕುಳಿತಿಹ ಸಲ್ಲದ ಕೆಲಸ ಮುದದಿ ಮಾಡಿರು- ವೆಲ್ಲ ಲೋಗರ ಬಿಟ್ಟು ಸುಮ್ಮನೆ ಮೋಡಿ ಮಾಡುವನೆ ಗಲ್ಲಿ ಗಲ್ಲಿಗೆ ಕುಳಿತ ದೇವರೆ ನಿಲ್ಲಿ ನಮ್ಮನು ಬದುಕಗೊಳಿಸಲು ಸಲ್ಲಿಸುತಿರುವ ಹರಕೆ ನಿಮಗದು ಸೇರದಾಗಿದೆಯೆ ವೈ.ಕೊ. ವೈಲೇಶ ಪಿ ಎಸ್ ಕೊಡಗು ೫/೭/೨೦೧೯

ಮಂದಾಕ್ರಾಂತ ಛಂದಸ್ಸು

ಮಂದಾಕ್ರಾಂತಾ ಅಕ್ಷರ ವೃತ್ತ. ೧೭ ಅಕ್ಷರ. ನಾನಾನಾನಾ ನನನನನ ನಾ ನಾನ ನಾನಾನ ನಾನಾ ಮನ್ದಾಕ್ರಾನ್ತಾ(ಮಂದಾಕ್ರಾಂತ) ಎನ್ನುವುದು ಅಕ್ಷರ(ವರ್ಣ) ವೃತ್ತವೊಂದರ ಹೆಸರು.ಪ್ರತೀ ಸಾಲಿನಲ್ಲಿ ಮಗಣ,ಭಗಣ,ನಗಣ, ತಗಣ,ತಗಣ,ಗುರು,ಗುರು ಹೀಗೆ ಹದಿನೇಳ ಅಕ್ಷರಗಳಿರುತ್ತವೆ. ಹದಿನೇಳು(೧೭)👆 *ಮಂದಾಕ್ರಾಂತ ಛಂದಸ್ಸಿನ ಪ್ರಥಮ ಪ್ರಯತ್ನ* ವಂದೇ ಮಾತಾ ಭವಭಯದ ಕೂರಂಬು ಬಂದಾಗಲೆಲ್ಲಾ| ನಿಂದೆಮ್ಮ ಕ್ಷೇಮವ ಬಯಸಿ ಕಾಪಾಡು ನೀನಾಗಿ ತಾಯೇ|| ಮುಂಜಾನೆದ್ದು ಸ್ಮರಿಸುತಲಿ ಮಾತಾನ್ನ ಪೂರ್ಣೇಶ್ವರೀಮಾ| ಎಂದಾರ್ತಧ್ಯಾನದಿ ನಮನಗೈದಾಗ ನಮ್ಮನ್ನು ಕಾಯ್ವಳ್||೧|| ಆರ್ತಧ್ಯಾನ= ಬಯಕೆಯ ಧ್ಯಾನ ವಂದೇ ಮಾ/ತಾ ಭವ/ಭಯದ/ ಕೂರಂಬು/ ಬಂದಾಗ/ಲೆಲ್ಲಾ| ನಿಂದೆಮ್ಮ /ಕ್ಷೇಮವ/ ಬಯಸಿ/ ಕಾಪಾಡು/ ನೀನಾಗಿ/ ತಾಯೇ|| ಮುಂಜಾನೆ/ದ್ದು ಸ್ಮರಿ/ಸುತಲಿ/ ಮಾತಾನ್ನ /ಪೂರ್ಣೇಶ್ವ/ರೀಮಾ| ಎಂದಾರ್ತ/ಧ್ಯಾನದಿ/ ನಮನ/ಗೈದಾಗ /ನಮ್ಮನ್ನು /ಕಾಯ್ವಳ್||೧|| *ಕಿಗ್ಗಾಲು ಎಸ್ ಗಿರೀಶ್* 12-07-2019 ಚಿಂತಾಕ್ರಾಂತಾ ಮನದೊಳಗೆ ನಾನಿಂದು ನೋಡಿದ್ದೆ ಬೇಕೇ| ಮಂದಾಕ್ರಾಂತಾ ಎನಗರಿತೇ ನಿನ್ನಾತ್ಮದಾನಂದ ಸಾಕೇ|| ಕಾವ್ಯಾರಾಮಾದಲಿ ಬರೆಯಲೇ ಪ್ರಾರಂಭದಲ್ಲೀಗ ಕೇಕೇ|| ಏನಾಗಿದ್ದಾಗಲಿ ಬರೆವೆನಾನೆಂದು ನಿಮ್ಮಲ್ಲಿ ಪೇಳ್ವೇ|| ನಾನಾನಾನಾ ನನನನನ ನಾ ನಾನ ನಾನಾನ ನಾನಾ

ಮೂರ್ನಾಡು ರಸ್ತೆಯ ಕವಿಗೋಷ್ಠಿಯ ಪತ್ರಿಕಾ ವರದಿಗಳು

ದಿನಾಂಕ ೮/೯/೨೦೧೯ ರ ಭಾನುವಾರದಂದು ಬೆಳಿಗ್ಗೆ ೧೦:೨೦ ಗಂಟೆಗೆ ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯ ಮನೆ ಮನೆ ಕಾವ್ಯಗೋಷ್ಠಿ ಪರಿವಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಸಾಹಿತ್ಯ ಸಂಘಟನೆಯ ಹನ್ನೊಂದನೆಯ ಕವಿಗೋಷ್ಠಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯು ವಹಿಸಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಆಗಿರುವ ಶ್ರೀ ದಾಮೋದರ ಆಚಾರ್ಯ ಎನ್ ವಹಿಸಿದ್ದರು. ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಟಿ ಪಿ ಕೃಷ್ಣರವರು ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ  ಸೋಮಣ್ಣ ಬಿ ಪಿ ಮನೆ ಮನೆ ಕಾವ್ಯಗೋಷ್ಠಿ ಪರಿವಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವಿರಾಜಪೇಟೆ ತಾಲ್ಲೂಕಿನ ಅಧ್ಯಕ್ಷರಾದ ಮಳುವಂಡ ನಳಿನಿ ಬಿಂದು ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕಿನ ಮನೆ ಮನೆ ಕಾವ್ಯಗೋಷ್ಠಿ ಪರಿವಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜಯಲಕ್ಷ್ಮಿ ಎಂ ಬಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಸಂಚಾಲಕ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಪಿ ಎಸ್ ವೈಲೇಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸುಮಾರು ೧೮ ಕವಿ ಕವಯತ್ರಿಯರು ಕವನ ವಾಚನ ಮಾಡಿದರು. ಕೃತಿಮ ಚೆಂಗಪ್ಪ ಇವರ ಗೀತೆಗೆ ಸದಾನಂದ ಪುರೋಹಿತ್ ರವರು ತಮ್ಮ ಕುಂಚದಲ...

ಮನೆ ಮನೆ - ಕೋರಿಕೆ

ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಆತ್ಮೀಯ ಬಂಧುಗಳೇ ತಮ್ಮ ತುಂಬು ಪ್ರೀತಿಯ ಅಭಿನಂದನೆಗಳು ಹಾರೈಕೆಗಳಿಗೆ ಹಾಗೂ ಆಶೀರ್ವಾದಗಳಿಗೆ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು ಮತ್ತು ಸಲ್ಲಿಸುತ್ತಿದ್ದೇನೆ. ತಮ್ಮೆಲ್ಲರ ಮನೆ ಮನದ ಕಂದ ನಾನು ಇಂದು ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಸಕಲ ಏಳಗೆಗಳಿಗೆ ಕಾರಣರು ಕೂಡ ತಾವೆಲ್ಲರೂ ಎನ್ನುವುದೇ ನನ್ನ ಮನದ ಭಾವನೆ. ತಮಗೆ ಅರಿಯದಂತೆ  ತಾವು ಯಾಕೋ ಹಿಂದೆ ಉಳಿದುಬಿಡುತ್ತಿದ್ದೀರಿ. ಹಾಗಾಗದೆ ನಾವೆಲ್ಲರೂ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದರೆ ತಮ್ಮೆಲ್ಲರ ಅದ್ಭುತ ಪ್ರತಿಭೆಯನ್ನು ಈ ಜಗದ ಒಳ್ಳೆಯ ಮನಸುಗಳು ಖಂಡಿತವಾಗಿ ಗುರುತಿಸುತ್ತವೆ. ಈಗಾಗಲೇ ಗುಂಪಿನಲ್ಲಿ ನಡೆಯುತ್ತಿರುವ ಕವಿಗೋಷ್ಠಿಯಂತಹ ಕಾರ್ಯಕ್ರಮದ ಜೊತೆಗೆ ನಿತ್ಯದ ರಸ ಪ್ರಶ್ನೆ ಕಾರ್ಯಕ್ರಮ ಕೂಡ ಎಲ್ಲರ ಮನ ಮನ ಬೆಸೆಯುವಂತಾಗಬೇಕು. ಹಾಗೆಯೇ ಛಂದೋಬದ್ಧ ಕವಿತೆಯ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳ ಕೊರತೆಯಿಂದ ಶ್ರೀಯುತ ಗಿರೀಶ್ ಕಿಗ್ಗಾಲುರವರು ಆಸಕ್ತಿ ಕಳೆದುಕೊಂಡು ಬಹುತೇಕ ಮರೆತು ಹೋದಂತಾಗಿದೆ. ಈಗಾಗಲೇ ಮೈಸೂರಿನ ನನ್ನ ಗೆಳೆಯರಾದ ಮುತ್ತುಸ್ವಾಮಿಯವರು ಮುಕ್ತಕ ಸಾಹಿತ್ಯ ಪರಿಷತ್ತಿನ ವತಿಯಿಂದ ನಮ್ಮ ಜಿಲ್ಲೆಯ ಇಬ್ಬರು ಕವಯತ್ರಿಯರ ಪುಸ್ತಕವನ್ನು ಪಡೆದು ಅವುಗಳನ್ನು ಮೈಸೂರಿನ ಮುಕ್ತಕ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನಕ್ಕಾಗಿ ಮಂಡಿಸುವವರಿದ್ದಾರೆ. ಇಂದಲ್ಲದಿದ್ದರೆ ನಾಳೆ ಆ ಪುಸ್ತಕಗಳಿಗೆ ಬಹುಮಾನ ಖಂಡಿತವಾಗಿ ದೊರೆಯುತ್ತದೆ...

ಮುಕ್ತಕ ಕುಸುಮ ಮಾಲೆ ೨

ಮುಕ್ತಕ ಕುಸುಮ ೫೧ ಹದವರಿತ ಮಾತುಗಳು ಮುದವನ್ನು ನೀಡುವವು ಮದದಿಂದ ನುಡಿಯುತಿರೆ ತಿರುವು ಮುರುವು| ಮೃದುವಾಗಿ ನುಡಿದಿರಲು ವದೆಗೆಂದು ನಿಂದವರ ಗದೆಯದುವೆ ಬಾಗುವುದು ಬೊಮ್ಮಲಿಂಗ|| ಹದವರಿತ ಮಾತುಗಳು ಮುದವನ್ನು ನೀಡುವವು ಮದದಿಂದ ನುಡಿಯುತಿರೆ ತಿರುವು ಮುರುವು| ಮೃದುವಾಗಿ ನುಡಿದಿರಲು ವದೆಗೆಂದು ನಿಂದವರ ಗದೆಯದುವೆ ಬಾಗುವುದು ಬೊಮ್ಮಲಿಂಗ|| ಮುಕ್ತಕ ಕುಸುಮ ೫೨ ಕಿಸಿಯಲಾಗದಿರೇನು ಕಸಿವುದಕೆ ಕೊನೆಯಿರದೆ ಹುಸಿಯ ನಡೆಯಲಿ ನಾವು ಬದುಕಲೇಕೆ ಹಸಿಹಸಿಯ ಸುಳ್ಳುಗಳ ಮಸಿಯಂತೆ ಬಳಿಯುತಲಿ ಕುಸಿವಂತೆ ಮಾಡುವರು ಬೊಮ್ಮಲಿಂಗ ಕಿಸಿಯಲಾಗದಿರೇನು ಕಸಿವುದಕೆ ಕೊನೆಯಿರದೆ ಹುಸಿಯ ನಡೆಯಲಿ ನಾವು ಬದುಕಲೇಕೆ ಹಸಿಹಸಿಯ ಸುಳ್ಳುಗಳ ಮಸಿಯಂತೆ ಬಳಿಯುತಲಿ ಕುಸಿವಂತೆ ಮಾಡುವರು ಬೊಮ್ಮಲಿಂಗ ಮುಕ್ತಕ ಕುಸುಮ ೫೩ ಚಾಡಿ ನುಡಿಯದು ಕಿವಿಗೆ ಮೋಡಿಯನು ಮಾಡುತಲಿ ರಾಡಿಯನು ಹೆಚ್ಚಿಸಿತು ನಮಗರಿಯದೆ ಕೋಡುಗಳ ಬಯಸಿರುವ ಹೇಡಿಗಳು ಹೂಡಿರುವ ವಾಡಿಕೆಯ ನುಡಿಗಳಿವು ಬೊಮ್ಮಲಿಂಗ ಚಾಡಿ ನುಡಿಯದು ಕಿವಿಗೆ ಮೋಡಿಯನು ಮಾಡುತಲಿ ರಾಡಿಯನು ಹೆಚ್ಚಿಸಿತು ನಮಗರಿಯದೆ ಕೋಡುಗಳ ಬಯಸಿರುವ ಹೇಡಿಗಳು ಹೂಡಿರುವ ವಾಡಿಕೆಯ ನುಡಿಗಳಿವು ಬೊಮ್ಮಲಿಂಗ ಮುಕ್ತಕ ಕುಸುಮ ೫೪ ಬರೆದಿಹೆನು ನಾನೆನುತ ಹರೆಯವನು ಕಳೆಯದಿರು ಹೆರವರದು ಹೊಗಳುತಿರೆ ಭಾರ ನಿನಗೆ ಬರಿದೆ ನೀ ನುಡಿಯುತಿರೆ ಬರೆಗಳನ್ನೆಳಯುತಲಿ ಸರಸತಿಯು ದೂಡುವಳು ಬೊಮ್ಮಲಿಂಗ ಬರೆದಿಹೆನು ನಾನೆನುತ ...

ಗುರುಗಳಿವರು

ಗುರುಗಳಿವರು ~~~~~~~~ ಶಿಕ್ಷೆಯೊಳು ಸಿಲುಕಿಸದೆ ಶಿಕ್ಷೆಯನು ತಾನುಂಡು ದಕ್ಷತೆಯ ಹಾದಿಯಲಿ ನಡೆಯುತಿರುವ ಭಕ್ಷಣೆಗೆ ಬಿಸಿಯೂಟ ಶಿಕ್ಷಣದ ಜೊತೆನೀಡಿ ರಕ್ಷಿಸುವ ಗುರುಗಳಿಗೆ ನಮನವೆಂಬೆ ಜಗದಲ್ಲಿ ಯಾರಿಹರು ಮಗುವಿದುವೆ ನಮದೆಂದು ನಗುನಗುತ ಸೇವೆಯನು ಮಾಡುವವರು ಬಗಲಲ್ಲಿ ಸಂಸಾರ ಮುಗಿಯದಿಹ ಕಾಯಕವು ಸಿಗುತಿಹುದೆ ನೆಮ್ಮದಿಯು ಕಲಿಸೊ ಮನಕೆ ಅರಿವನ್ನು ನೀಡುವಗೆ ಗುರುವೆಂದು ನುಡಿಯುವರು ಗರಿಯಿವರು ಮನುಕುಲಕೆ ಲೋಕದೊಳಗೆ ಮರೆಯದಿರಿ ಗುರುಗಳನು ಬರೆಯುವುದ ಕಲಿಸಿಹರು ಮೆರೆಯಿಸಿರಿ ನಿಮ್ಮಲಿಹ ಜಾಣ್ಮೆ ತೋರಿ ಅಕ್ಕರೆಯ ಮಾತಿನಲಿ ಲೆಕ್ಕವನು ಕಲಿಸಿಹರು ಲೆಕ್ಕಿಸದೆ ಬರೆಯುತಿರೆ ನೀವದಿಂದು ಸಕ್ಕರೆಯ ಮನವಿರುವ ಮಕ್ಕಳಿಗೆ ಕಲಿಸಿರಲು ತಕ್ಕರಾಗಿಹರಿಂದು ಬದುಕಿನಲ್ಲಿ  ಒಲಿದಿರುವ ತಿಳಿವಿನಲಿ ಬಲಿಯುತಿರಿ ದಿನದಿನವು ಬೆಳಗುತಿರಿ ಲೋಕದೊಳು ದೀಪದಂತೆ ಕಲಿಸಿರುವ ಕೂಸುಗಳು ಬೆಳೆಯುತಿರೆ ಬದುಕಿನಲಿ ನಲಿಯುವುದು ಬಹುವಿಧದಿ ಗುರುವ ಮನವು ಪಶಿವೈ ಪಿ ಎಸ್ ವೈಲೇಶ ಕೊಡಗು ೫/೯/೨೦೧೯

ಮಹರ್ಷಿ ವಾಲ್ಮೀಕಿ

ಮಹರ್ಷಿ ವಾಲ್ಮೀಕಿ ~~~~~~~~~~~ ವಲ್ಮೀಕ ಮುಚ್ಚಿದ ಘಮ ಘಮ ಸುಮವೆ ರಾಮಾಯಣ ಮಹಾಕಾವ್ಯದ ಆಗಮವೆ ಅಮರ ಮೇರುಗಿರಿಯಾದರಿ ಅಸಮವೆ ಕೈ ಪಿಡಿದೆನ್ನನು ಬರೆಯಿಸಿರಿ ಸುಗಮವೆ ಜಿಹ್ವೆಯು ಹೊರಳದೇ ಮರ ಮರವೆಂದೆ ರಾಮಾಯಣ ಎಂದಾಯಿತದು ಮುಂದೆ ಬರಹದಿ ಸಕಲ ಕುಲ ಮನ ಮನೆಯಾದೆ ನಿನ್ನೊಳಗೆ ಸೇರಿ ಜಗದ ಜ್ಯೋತಿ ನೀನಾದೆ ಸಂಸಾರ ಪಾಪವನು ಹೊರುವುದೆಂದರಿತೆ ನಿಜ ಸಮಾಜ ವಿರೋದಿಯು ನೀನಾಗಿದ್ದೆ ಜಪ ತಪದ ತಾಪದಲಿ ಅರಳಿ ಹೂವಾದೆ ಜಗದ ನಿಯಮಕೆ ದಾರಿ ದೀಪ ನೀನಾದೆ ನಿನ್ನಯ ನುಡಿಗಳ ಹಣತೆಯನು ಹಚ್ಚು ಮನವ ಮಾಡಿ ಆರಿಸು ತಮದ ರಚ್ಚು ನಿನ್ನಿಂದ ಮೂಡಲಿ ಭರವಸೆಯ ಕೆಚ್ಚು ತಾರತಮ್ಯ ಅಳಿಸಿ ಒದ್ದೋಡಿಸು ಹುಚ್ಚು ಪ್ರಕೃತಿಯ ಮಡಿಲ ಮಗುವು‌ ನಿನಾಗಿದ್ದೆ ನಿನ್ನೀ ಬರಹದಲಿ‌ ವಿರೋಧಿಗಳನೇ ಗೆದ್ದೆ  ವಿಶ್ವ ಮಾನ್ಯನು ಗುರುವೆ ನಿಮಗೆ ಶರಣೆಂಬೆ ಮಹರ್ಷಿ ವಾಲ್ಮೀಕಿ ಆದಿಕವಿ ನೀವೇ ತಂದೆ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೫/೧೦/೨೦೧೭

ಮಕ್ಕಳಿಗೆ ಪರಿಸರ ಜ್ಞಾನ ಹೆಚ್ಚಿಸಿ

ಮಕ್ಕಳಿಗೆ ಪರಿಸರ ಜ್ಞಾನ ಹೆಚ್ಚಿಸಿ ~~~~~~~~~~~~~~~~~ ಕಳೆದ ಸಂಚಿಕೆಯಲ್ಲಿ ನಾವು ಕಾಡು ಬೆಳೆಸಿದವರಾರು ಎಂಬ ಬಗ್ಗೆ ಪುಟ್ಟ ಲೇಖನವನ್ನು ಓದಿದೆವು. ಈಗ ನಾವು ಬಳಸಿದ ಬಳಸುತ್ತಿರುವ ಕಾಡುಗಳನ್ನು ಬೆಳೆಸಿದವರ ಮನದೊಳಗೆ ಇದ್ದ ಭಾವಗಳೇನೆಂದು ಅರಿಯುವ ಬನ್ನಿ.  ಹಿಂದೆ ನಾವುಗಳು ಶಾಲೆಗೆ ಹೋಗುವ ಸಮಯದಲ್ಲಿ ಒಂದು ಪಾಠವನ್ನು ನಾವುಗಳು ಅಂದರೆ ಐವತ್ತರ ಆಸುಪಾಸಿನ ವಯಸ್ಸಿನ ಚಂದಮಾಮ ಅಥವಾ ಬೊಂಬೆಮನೆಯಂತಹ ಪುಸ್ತಕಗಳನ್ನು ಓದಿದವರಿಗೆ ಈ ಕಥೆಯನ್ನು ಜ್ಞಾಪಿಸಿಕೊಳ್ಳುವ ಅವಕಾಶವನ್ನು ಮತ್ತೊಮ್ಮೆ ಒದಗಿಸುತ್ತೇನೆ. ಮತ್ತು ಇಂದಿನ ಪೀಳಿಗೆಯ ಸಕಲರಿಗೂ ಉಡುಗೊರೆಯಾಗಿ ಈ ಕಥೆಯನ್ನು ನೀಡಲು ಮನವು ಹಾತೊರೆಯುತ್ತಿದೆ.  ಹಿಂದೆ ತೊಂಬತ್ತರ ಇಳಿವಯಸ್ಸಿನಲ್ಲೂ ಒಬ್ಬರು ತಮ್ಮ ತೋಟದಲ್ಲಿ ಒಂದಷ್ಟು ಹಣ್ಣಿನ ಮರಗಳನ್ನು ನೆಡಲು  ಪ್ರಯತ್ನಿಸುತ್ತಿದ್ದರು. ಆಗ ದಾರಿಯಲ್ಲಿ ಸಾಗುವ ಪ್ರಯಾಣಿಕರಲ್ಲಿ ಯಾರೋ ಕಿಡಿಗೇಡಿಯೊಬ್ಬ ಏ ಮುದುಕ ಇಂದೊ ನಾಳೆಯೊ ಸಾಯುವವನಂತೆ‌ ನೀನಿದ್ದೀಯಾ ನೀನು ನೆಡುತ್ತಿರುವ ಮರಗಳ ಹಣ್ಣುಗಳನ್ನು ತಿನ್ನಲು ನೀನು ಬದುಕಿರುವುದು ಅಸಾಧ್ಯ ಹಾಗಿದ್ದರೂ ಸಹ ಹಣ್ಣಿನ ಗಿಡಗಳನ್ನು ನೆಡುವ ಪ್ರಯತ್ನ ನಿನಗೇಕೆ ಎಂದು ಕೇಳಿದನು. ಆಗ ಆ ವೃದ್ಧರು ಆತನನ್ನು ಅನುನಯದ ಮಾತಿನಿಂದ ಬಳಿಗೆ ಕರೆದು ನೀನು ಹುಟ್ಟಿದಂದಿನಿಂದ ನಿನ್ನ ಬುದ್ದಿ ಬೆಳವಣಿಗೆಯ ಮುನ್ನವೇ ಹಣ್ಣುಗಳನ್ನು ಇಲ್ಲಿಯವರೆಗೆ ಸೇವಿಸುತ್ತಿದ್ದಿಯಲ್ಲವೇ ಎಂದು ಕೇಳಿದರು. ಅದಕ್ಕೆ ...

ಭಾಮಿನೀ ಷಟ್ಪದಿ ನಾಡ ಸಂಸ್ಕೃತಿ

ನಾಡ ಸಂಸ್ಕೃತಿಯನುಳಿಸೋಣ ~~~~~~~~~~~~~~~~~ ಭಾಮಿನೀ ಷಟ್ಪದಿ ನುಡಿದು ನಲಿಯಲು ನಾವು ಕನ್ನಡ ಹಡೆದ ಮಾತೆಯ ಕಾವ ತೆರದಲಿ ನಡೆದು ಬಾಳುತ ಭಾಷೆ ಬೆಳೆಸುವ ರೀತಿ ಮರೆಯದಿರಿ ಬಿಡದೆ ನುಡಿಯಲು ಬೇರೆ ಮಾತನು ಪಡೆಯೆ ಸಾಧ್ಯವೆ ತಾಯ ಮಮತೆಯ ಕಡೆಗೆ ನಮ್ಮಯ ನಾಡ ಸಂಸ್ಕೃತಿಯಳಿಯಿತೆನ್ನುವಿರಿ|| ಬೇರೆ ಲೋಗರ ರೀತಿ ನೀತಿಯ ತಾರೆಯಂದದಿ ಹೊಗಳಿ ಹಾಡುತ ಯಾರೆ ಬಂದರು ನುಡಿಯುತವರದೆ ಭಾಷೆ ಬೆಳೆಸದಿರಿ ವೀರರಂದದಿ ಸಾರಬೇಕಿದೆ ಸಾರ ತುಂಬಿದ ನಮ್ಮ ನುಡಿಯನು ಧೀರತನದಲಿ ಕಲಿಸಿ ಕನ್ನಡ ಹೆಮ್ಮೆಯೆನಿಸುತಿರಿ ಅಚ್ಚುಕಟ್ಟಿನ ನಮ್ಮ ನುಡಿಯನು ಮೆಚ್ಚುವಂತೆಯೆ ನಾವು ನುಡಿಯುತ ಕಿಚ್ಚು ಹಚ್ಚುತ ನಾಡ ದೇವಿಯ ಹೆಸರನುಳಿಸೋಣ ಬಿಚ್ಚು ಮನಸಿನ ಜನರೆ ಕೇಳಿರಿ ಹುಚ್ಚುತನವನು ಬಿಟ್ಟು ಭಾಷೆಯ ಕೆಚ್ಚು ತುಂಬುತ ಸಕಲ ಜನರೊಳು ಸೇರಿ ಬಾಳೋಣ ಬನ್ನಿ ಗೆಳೆಯರೆ ಗೆಳತಿ ಸೋದರಿ ಕನ್ನಡಾಂಬೆಯ ರಥವನೆಳೆಯಲು ಹೊನ್ನಮನದಲಿ ಸೇರಿ ನಲಿಯುತ ನಾವು ಬೆರೆಯೋಣ ಚಿನ್ನ ಬೆಳೆಯುವ ನಾಡು ನಮ್ಮದು ರನ್ನ ಪಂಪರು ಬರೆದು ಬೆಳಗಿದ ಜೊನ್ನ ಕವಿತೆಯ ಹಾಡಿ ಹೊಗಳುತ ಬದುಕು ಸವೆಸೋಣ ಪಶಿವೈ ಪಿ ಎಸ್ ವೈಲೇಶ ಕೊಡಗು ೧೪/೧೦/೨೦೧೯

ಮುಕ್ತಕ ಕುಸುಮ

ಮುಕ್ತಕ ಕುಸುಮ ಮುಕ್ತಕ ಪ್ರೀತಿಯೆಂದರೆ ಹಲವು ರೀತಿಗಳುಂಟು ಕೇಳಿ  ನೀತಿಯೊಳಗಿನಿತಿಣುಕಿ ನೋಡಿಯೊಮ್ಮೆ ಜ್ಯೋತಿಯಂತೆಯೆ ಬೆಳಗಿ ಮಾತಿನೊಳು ಸಿಲುಕದೆಲೆ ಭೀತಿಯಿರದೆಲೆ ಬದುಕಿ ಬೊಮ್ಮಲಿಂಗ ಕುಸುಮ ಪ್ರೀತಿಯೆಂದರೆ ಹಲವು  ರೀತಿಗಳುಂಟು ಕೇಳಿ  ನೀತಿಯೊಳಗಿನಿತಿಣುಕಿ ನೋಡಿಯೊಮ್ಮೆ ಜ್ಯೋತಿಯಂತೆಯೆ ಬೆಳಗಿ ಮಾತಿನೊಳು ಸಿಲುಕದೆಲೆ ಭೀತಿಯಿರದೆಲೆ ಬದುಕಿ ಬೊಮ್ಮಲಿಂಗ ಪಶಿವೈ ಪಿ ಎಸ್ ವೈಲೇಶ ಕೊಡಗು ೧೯/೧೦/೨೦೧೯

ಯೋಧರು ಲಾವಣಿ

ಯೋಧರ ಲಾವಣಿ ~~~~~~~~~~ ಕೇಳಿರಿ ಸೋದರ ಕೇಳಿ ಸೋದರಿ ಪೇಳುವೆ ಯೋಧರ ಲಾವಣಿಯಾ ಕೇಳಿಯ ತೋರುತ ದೇಶವ ಕಾಯುತ- ಲೇಳಿಗೆ ಹೊಂದಿದ ಲಾವಣಿಯಾ ಭಾರತ ದೇಶವ ಕಾಯುವ ಯೋಧರೆ ತೋರುವೆ ಗೌರವ ನಿಮಗಿಂದು ದೂರದ ಗಡಿಯಲಿ ನಿಂತಿಹ ದೇವನೆ ಯಾರದೆ ಹಂಗದು  ದೋಷವನೆಣಿಸದೆ ಕರುಣೆಯನೀಯದೆ ಮಾಸದ ನೆನಪನು ಜೊತೆಗಿರಿಸಿ ದೇಶದ ಸೇವೆಗಧೀಶನು ನಿಮ್ಮನು ವೇಷವ ಮರೆಯಿಸಿ ಕಳುಹಿಸಿದ ಬೇರ್ಗಳ ನೆನಪಿನ ಹಾಡದು ನಿಮ್ಮಯ ಮಾರ್ಗವ ತೋರುತ ಕೆಣಕುತಿರೆ ಕಾರ್ಗಿಲ್ ಮೇಲ್ಗಡೆ ನುಸುಳುವ ಚೋರಗೆ ನೀರ್ಗಲ್ ಮೇಲೆಯೆ ಕಾದಿರುವೆ ತನುಮನವೆಲ್ಲವನತಿಸುಖ ಬಯಸದೆ ಘನತರ ಕಾರ್ಯಕೆ ಬಳಸಿದಿರಿ ಮನೆ ಮಠವೆನ್ನುತ ಸಿರಿತನ ಮೆರೆದಿಹ ಮನಗಳು ನಿಮಗದು ಸಮವೇನು ಕೆಡುಕಿನ ಲೋಗರು ದೇಶಕೆ ಮೋಸವ ನಡುರಾತ್ರಿಯಲೂ ಮಾಡುವರು ಬಡತನ ಸಿರಿತನವೆನ್ನದೆ ಬದುಕನು ಕಡುಗಾವಲಿನಲಿ ಕಳೆಯುವಿರಿ ಇಷ್ಟದ ಕಾಯಕ ಪಡೆದಿಹ ನೀವದು ದುಷ್ಡರ ಶಿಕ್ಷೆಯ ಮಾಡುವಿರಿ ಕಷ್ಟದ ಸಮಯದಿ ಭೇಧವ ತೋರದೆ ಶಿಷ್ಟರ ರಕ್ಷಣೆಗಿಳಿಯುವಿರಿ ಗಡಿಯಲಿ ಕಾಯುತ ಕುಳಿತಿರೆ ನೀವ್ಗಳು ದುಡಿಯಲು ನಾವ್ಗಳು ಹೊರಡುವೆವು ದುಡಿತದ ಫಲವದು ಬೆಳೆವುದು ದೇಶವು ದುಡಿಮೆಯೆ ದೇವರದೆನ್ನುವೆವು ಅಮ್ಮನ ಕಣ್ಣಿನ ನೀರಿಗೆ ಹೆದರದೆ ಬಿಮ್ಮನೆ ಗಡಿಯೆಡೆ ನಡೆಯುವಿರಿ ನಿಮ್ಮಯ ತ್ಯಾಗಕೆ ಸರಿಸಮವಿರುವುದೆ ಸುಮ್ಮನೆ ನುಡಿದರೆ ಸಾಲುವುದೆ ಭೈರವನಾಣೆಗು ತಪ್ಪದೆಯೆಲ್ಲರು ಗೌರವ ನಿಮಗದು ನೀಡುತಿರೆ ರೌರವ ನರಕವ ತಪ್ಪಿಸಿ ದೇಶ...

ಆಟಿ ಲಾವಣಿ

ಆಟಿ ಲಾವಣಿ ~~~~~~~ ಶ್ರಾವಣ ಮಾಸದಿ ಹಬ್ಬದ ಸಡಗರ ಲಾವಣಿ ಹಾಡಿಗೆ ಸಂತಸವು ಧಾವಣಿ ಧರಿಸಿಹ ತರುಣಿಯ ಜತೆಯಲಿ ಛಾವಣಿ ಹಾರಿಸೆ ಹಾಡುವೆವು||ಪಲ್ಲವಿ|| ಆಟಿಯ ಹಬ್ಬವು ಬಂದಿದೆ ನೋಡಿರಿ ನಾಟಿಯ ಕೆಲಸದ ನಡುವಿನಲಿ ದಾಟ...

ಭಾಮಿನೀ ಷಟ್ಪದಿ

ಭಾಮಿನಿ ಷಟ್ಪದಿ ೦೧ ಕೊರೆದು ದಿನವೂ ಧರೆಯ ಮಡಿಲನು ಹರಿಸಿ ಜಲವನು ಬರಿದು ಗೊಳಿಸಿರೆ ತರಿದು ವನವನಳಿಸಲು ಪರಿಸರ ಮಳೆಯು ಸುರಿದೀತೆ ಬರಿಯ ಮಾತಲಿ ವನವನುಳಿಸಿರೆ ತಿರಿದು ಬದುಕಲು ಮನವ ಮಾಡುತ ಧರೆಯ ಕಳೆದೊಡೆ ನಮ್ಮ ಪೀಳಿಗೆ ಮುಂದೆ- ಯುಳಿದೀತೆ ವೈ.ಕೊ. ವೈಲೇಶ ಪಿ ಎಸ್ ಕೊಡಗು ೧೩/೪/೨೦೧೯ ಭಾಮಿನಿ ಷಟ್ಪದಿ- ೦೨ ಇಳೆಯ ಕೊಳೆಯನು ತೊಳೆಯಬಾರದೆ ಮಳೆಯ ದೇವನೆ ನೀನು ಕೋಪವ ತಳೆದು ಮಳೆಯನು ಸರಿಸಿ ನಡೆದೊಡೆ ಸಾವು ಬರದೇನು ಅಳಿವ ಜೀವಿಯ ಮೊರೆಯ ಕೇಳದೆ- ಳಳಿಸಿ ಹಾಕಲು ಜೀವ ಸಂತತಿ ನಿಲುವ ತಳೆದುದು ಸರಿಯೆ ವರುಣನೆ ಕರುಣೆಯಿರದೇನು. ವೈ.ಕೊ. ವೈಲೇಶ ಪಿ ಎಸ್ ಕೊಡಗು ಭಾಮಿನಿ ಷಟ್ಪದಿ -೦೩ ಪಡುವಣದ ಹಾದಿ ಹಿಡಿದ ರವಿಯ ತಡೆಯಲಹುದೇ ಎಂದರಿಯದೇ ಮಡಿಲ ತುಂಬಾ ನೀರ ಹನಿಗಳ ಹೀರಿದಿಬ್ಬನಿಯು ಮಡಿಯತೊಡಗಿದ ಜಲದ ವೇಗಕೆ ತಡಿಯುಡುಗಲು ಮರುಗುತ ಮರೆಯದೆ ಗಡಬಡಿಸಿ ಧರೆಗಿಳಿದು ಮಾಯವಿಯಾಗತೊಡಗಿದನೆ *ವೈ.ಕೊ* *ವೈಲೇಶ ಪಿ ಎಸ್ ಕೊಡಗು* *೧೪/೪/೨೦೧೯* ಭಾಮಿನಿ ಷಟ್ಪದಿ-೦೪ ರವಿಯು ಲಘಬಗೆಯಿಂದ ದಿನವೂ ಕವಿದ ಮಂಜನು ತೊಡೆದು ಚಲಿಸುತ ಬುವಿಗೆ ತನುವಿನ ಕಿರಣ ಸೂಸಲು ಮೊದಲು ಗೊಂಡಿಹನು ಸವಿಯ ಕಿರಣಕೆ ಸಕಲ ಜೀವಿಯು ಭವದ ಬದುಕಿನ ದಿನದ ಕಾಯಕ- ದವನ ನಡೆಯನು ಹರುಷದಿಂದಲಿ ಎದುರು ಗೊಂಡಿಹರು ವೈ.ಕೊ. ವೈಲೇಶ ಪಿ ಎಸ್ ಕೊಡಗು ೧೫/೪/೨೦೧೯ ಭಾಮಿನಿ ಷಟ್ಪದಿ-೦೫ ಕೆರೆಯ ನೀರೊಳು ತೇಲಿ ನಲಿದಿರು- ವರಳು ಕಮಲದ ಪಕಳೆ ಮೇಲಣ ಜರಿಯ ಸೊಬಗ...

ಮುಕ್ತಕದ ಮುತ್ತಿನಲೆ ೦೩

ಮುಕ್ತಕ ಕುಸುಮ ೮೧ ಮುಕ್ತಕದ ಅಲೆ ೯೧ ಅಂಬುಗಳು ನೂರಾರು ರೆಂಭೆಯನು ಸಿಗಿಯೆ ಖಗ- ವಂಬರಕೆ ಸೂಕ್ಷ್ಮದಲಿ ಹಾರದಿಹುದೆ| ಕುಂಬಿನಿಯ ವರದಿಂದ ನಂಬಿರುವ ರೆಕ್ಕೆಯದು ಕುಂಭದಾ ಹಾಗೆಂಬೆ ಬೊಮ್ಮಲಿಂಗ|| ಕುಸುಮ ಷಟ್ಪದಿ ೮೧ ಅಂಬುಗಳು ನೂರಾರು ರೆಂಭೆಯನು ಸಿಗಿಯೆ ಖಗ- ವಂಬರಕೆ ಸೂಕ್ಷ್ಮದಲಿ ಹಾರದಿಹುದೆ| ಕುಂಬಿನಿಯ ವರದಿಂದ ನಂಬಿರುವ ರೆಕ್ಕೆಯದು ಕುಂಭದಾ ಹಾಗೆಂಬೆ ಬೊಮ್ಮಲಿಂಗ|| ಮುಕ್ತಕ ಕುಸುಮ ೮೨ ಮುಕ್ತಕದ ಅಲೆ ೯೨ ಇತಿಮಿತಿಯನರಿಯದೆಲೆ ಮತಿಗೆಟ್ಟು ಮಾತಾಡಿ ಗತಿಗೆಟ್ಟು ಕುಳಿತವರೆ ಕೇಳಿ ನೀವು| ಅತಿಯಾದ ವಿಶ್ವಾಸ ಹಿತವಿರದು ತಮಗೆಂದು ಹಿತವಚನ ಪಾಲಿಸಿರಿ ಬೊಮ್ಮಲಿಂಗ|| ಕುಸುಮ ಷಟ್ಪದಿ ೮೨ ಇತಿಮಿತಿಯನರಿಯದೆಲೆ ಮತಿಗೆಟ್ಟು ಮಾತಾಡಿ ಗತಿಗೆಟ್ಟು ಕುಳಿತವರೆ ಕೇಳಿ ನೀವು| ಅತಿಯಾದ ವಿಶ್ವಾಸ ಹಿತವಿರದು ತಮಗೆಂದು ಹಿತವಚನ ಪಾಲಿಸಿರಿ ಬೊಮ್ಮಲಿಂಗ|| ಮುಕ್ತಕ ಕುಸುಮ ೮೩ ಮುಕ್ತಕದ ಅಲೆ ೯೩ ಉಗುಳುವಗೆ ಬಲವೀವ ಹೊಗಳುವವ ಬೇಕಿಲ್ಲ ತೆಗಳುತಲೆ ತೆರೆಮರೆಗೆ ಸರಿದುಬಿಡುವ| ಉಗುರಿನಲಿ ಹೋಪುದಕೆ ಬಗಲಲ್ಲಿ ಪರಶೇಕೆ ಹೆಗಲೇರೆ ಅಪರಾದ ಬೊಮ್ಮಲಿಂಗ|| ಕುಸುಮ ಷಟ್ಪದಿ ೮೩ ಉಗುಳುವಗೆ ಬಲವೀವ ಹೊಗಳುವವ ಬೇಕಿಲ್ಲ ತೆಗಳುತಲೆ ತೆರೆಮರೆಗೆ ಸರಿದುಬಿಡುವ| ಉಗುರಿನಲಿ ಹೋಪುದಕೆ ಬಗಲಲ್ಲಿ ಪರಶೇಕೆ ಹೆಗಲೇರೆ ಅಪರಾಧ ಬೊಮ್ಮಲಿಂಗ|| ಮುಕ್ತಕ ಕುಸುಮ-೮೪ ಮುಕ್ತಕದ ಅಲೆ-೯೪ ಬರೆದಿರುವ ಬರಹಗಳ ಮರುಗಳಿಗೆ ಹಂಚದೆಲೆ ತಿರುತಿರುಗಿ ತಿದ್ದ...

ಮುಕ್ತಕ ಕುಸುಮ

ಮುಕ್ತಕ ಕುಸುಮ ೧೦೫ ಮಾಣಿಗಳ ಮೊಗದಲ್ಲಿ ಕಾಣೆಯಾಗಿದೆಯಿಂದು ವೀಣೆಯಂತುಲಿವ ಸವಿಯಾದ ಮಾತು ಕಾನನದಿ ನಡೆವಂತೆ ಮಾನಿನಿಯು ಧನಮೋಹ ಮೇಣ್ ಕಾಣೆ ಬೇರೇನ ಬೊಮ್ಮಲಿಂಗ ಮಾಣಿಗಳ ಮೊಗದಲ್ಲಿ ಕಾಣೆಯಾಗಿದೆಯಿಂದು ವೀಣೆಯಂತುಲಿವ ಸವಿಯಾದ ಮಾತು ಕಾನನದಿ ನಡೆವಂತೆ ಮಾನಿನಿಯು ಧನಮೋಹ ಮೇಣ್ ಕಾಣೆ ಬೇರೇನ ಬೊಮ್ಮಲಿಂಗ ಮುಕ್ತಕ ಕುಸುಮ ೧೦೬ ಇನಿಧನಿಯ ಕಲಿಸಲಿಕೆ ತನುವ ಕಂದಗಳಿಗಿರ ಲೆನುತ ಪೋಷಕರು ತಿಳಿಯಬೇಕು ತನುವಿನಲಿ ಬೆತ್ತದಾ ಗುಣಗಾನವನು ಗುರುವು ನೆಣ ತೆಗೆಯುವಂತಿರಲಿ ಬೊಮ್ಮಲಿಂಗ ಇನಿಧನಿಯ ಕಲಿಸಲಿಕೆ ತನುವ ಕಂದಗಳಿಗಿರ ಲೆನುತ ಪೋಷಕರು ತಿಳಿಯಬೇಕು ತನುವಿನಲಿ ಬೆತ್ತದಾ ಗುಣಗಾನವನು ಗುರುವು ನೆಣ ತೆಗೆಯುವಂತಿರಲಿ ಬೊಮ್ಮಲಿಂಗ ಮುಕ್ತಕ ಕುಸುಮ ೧೦೭ ಧನಿಗೂಡಿ ಗುಡುಗಿನಲಿ ಹನಿ ಮಳೆಯು ತನಿಯಾಗಿ ತನನನನ ಹಾಡಿರಲು ಧರೆಯು ಚಿಗುರಿ| ನನಗಾಗಿ ಏನಿಲ್ಲ ನಿನಗಾಗಿ ನನದೆಂದು ಗೊಣಗಿದಳು ಭೂದೇವಿ ಬೊಮ್ಮಲಿಂಗ.|| ಧನಿಗೂಡಿ ಗುಡುಗಿನಲಿ ಹನಿ ಮಳೆಯು ತನಿಯಾಗಿ ತನನನನ ಹಾಡಿರಲು ಧರೆಯು ಚಿಗುರಿ| ನನಗಾಗಿ ಏನಿಲ್ಲ ನಿನಗಾಗಿ ನನದೆಂದು ಗೊಣಗಿದಳು ಭೂದೇವಿ ಬೊಮ್ಮಲಿಂಗ.|| ಮುಕ್ತಕ ಕುಸುಮ ೧೦೮ ಪೋಷಕರು ಕೊನೆವರೆಗು ಘೋಷಿಸುತ ಮಕ್ಕಳಿಗೆ ಘೋಷಗಳ ಧರಿಸಿತಿರಿಯೆನ್ನಲಹುದೆ ಪೋಷಿಸುವ ಸಲುವಾಗಿ ವೇಷವನು ಹೊಗಳದೆಲೆ ದೋಷವನು ತಿಳಿಸುತಿರಿ ಬೊಮ್ಮಲಿಂಗ ಪೋಷಕರು ಕೊನೆವರೆಗು ಘೋಷಿಸುತ ಮಕ್ಕಳಿಗೆ ಘೋಷಗಳ ಧರಿಸಿತಿರಿಯೆನ್ನಲಹುದೆ ಪೋಷಿಸ...

ಕಲಿಯುಗದ ಮಳೆರಾಯನ ಲಾವಣಿ

ಕಲಿಯುಗದ ಮಳೆರಾಯ (ಲಾವಣಿ) ~~~~~~~~~~~~~~~~~~~ ಬಲಿತಿಹ ಕವಿಗಳ ನೆನೆಯುತ ಪಾಡುವೆ ಕಲಿತಿಹ ನುಡಿಗಳ ನಿಮ್ಮೊಡನೆ ಕಲಿಯುಗವೆನ್ನದೆ ಕುಣಿಯುತ ಬರುವೆನು ಕಲಿಯಲು ಗುರುವೇ ನಮಿಸುತಲಿ ಒಲಿಯದೆ ಹೋದನು ಕಲಿಯುಗವೆಂದನು ಬಲಿತರು ಋತುಗಳು ಮಹರಾಯ ಕುಳಿತಿಹ ತಾಣದಿ ಕಳಿತೇ ಹೋದರು ಬೆಳೆಗಳ ಬೆಳೆಯಲು ನೀರಿಲ್ಲ ಹಾಡಿನ ರಾಗಕೆ ತಾಳವ ನೀಡದೆ ಕಾಡಿದ ವರುಣನು ತಾನಂದು ಕಾಡಿನ ಮಿಗಗಳ ಕಾಣದೆ ಸುರಿದನು ನೋಡದೆ ಪಾಡನು ತಾನೆಂದು ಬರದಲಿ ಕರೆಯುತ ಕೊರಗುತಲಿದ್ದರು ಕರದಲಿಯಾಗಸ ದಿಟ್ಟಿಸುತ ಬರದೆಲೆ ನೋಯಿಸಿ ಬರವನು ಹೆಚ್ಚಿಸಿ ಮರವನು ಕಡಿದಿರಿ ನೀವೆಂದು ಒಡವೆಯು ಕಳೆಯಿತು ಮನೆಯದು ಮುರಿಯಿತು ತಡವಿದ ಸಕಲವ ಮೆಲ್ಲುತಲೀ ಅಡವಿಯ ಕಡಿದಿಹ ಕೆಡುಗರ ಬದಲಿಗೆ ಕೆಡವಿದ ಮೆತ್ತನೆ ಲೋಗರನು ಬಡವನ ಬವಣೆಯ ಕೇಳಲು ತೋಚದೆ ಬಡಿಯುತ ತಿನ್ನಲು ಕಾದಿಹರು ನುಡಿವುದ ನಡೆಯದೆ ಕೊಡುವುದನರಿಯದೆ ಪಡೆಯಲು ಸಾಧ್ಯವೆ ನೋಡಿಹರು ಕೇಳದೆ ನೀಡುವ ಮನವದು ಹಲರಿಗೆ ಹೇಳಿರಿ ನೀವೇ ಬಲ್ಲವರ ಕೂಳಿನ ಜೊತೆಯಲಿ ಮುಂದಿನ ದಿನಗಳ ಕಾಳನು ಮರೆಯದೆ ನೀಡಿದರು ಜಗದಲಿ ಮಾನವ ಮಾತ್ರವದಲ್ಲದೆ ಖಗಮಿಗಗಳಿಗೂ ನೋವುಂಟು ಹಗಲಲಿ ಕೊರಗುತ ವಿರುಳಲಿ ಮರುಗುತ ರಗಳೆಯ ಮಳೆಯಲಿ ನೊಂದಿಹವ ಅಗುಳಿನ ಶತ್ರುವು ಮಿತ್ರನ ಜೊತೆಯಲಿ ಹೆಗಲಿಗೆ ಹೆಗಲನು ನೀಡುವನು ಹಗಲಿರುಳಲಿ ಗಳಿಸಿಹ ಹಣ ಚಿತೆಯಲಿ ಬಗಲಿಗೆ ತಾನೂ ಬರಲಿಲ್ಲಾ ಅಣ್ಣರು ತಮ್ಮರು ಆಸ್ತಿಗೆ ನಿಲ್ಲುತ ಸುಣ್ಣವ ಬಳಿದರು ಮೊ...

ಮುಕ್ತಕ ಮಾಲೆ

ಮುಕ್ತಕ ಕುಸುಮ ೧೧೧ ಗಲ್ಲಿ ಗಲ್ಲಿಗಳಲ್ಲಿ ಲಿಲ್ಲಿ ಹೂಗಳು ಬೆಳೆದು ನಿಲ್ಲಲಲ್ಲಿಯೆ ಮಹಿಳೆ ಮೆರೆಯುತಿಹಳು.| ಮಳ್ಳಿ ಸುಮವದು ಮೆಲ್ಲ ಮೆಲ್ಲನೆನುತ ಮನದೊಳ- ಗಿಳಿಯುತಲಿ ನಡೆಯುತಿದೆ ಬೊಮ್ಮಲಿಂಗ|| ಗಲ್ಲಿ ...