ಕಂಪ್ಲಾಪುರ ಮೋಹನ್ ಒಂದು ನೆನಪು
ಕಂಪ್ಲಾಪುರ ಮೋಹನ್ ಒಂದು ನೆನಪು ~~~~~~~~~~~~~~~~~~~~ "ತಾನೊಂದು ನೆನೆದರೆ ಮಾನವ ಬೇರೊಂದು ಬಗೆವುದು ದೈವ" ರೇಡಿಯೋ ಹಾಡು ಸಂದರ್ಭೋಚಿತ ಎನಿಸುತ್ತಿತ್ತು. ೨೦೧೮ ಮೇ ತಿಂಗಳ ಯಾವುದೋ ಒಂದು ಪತ್ರಿಕೆಯಲ್ಲಿ ಕವಿಗೋಷ್ಠಿಯ ಜಾಹೀರಾತು. ಕಂಪ್ಲಾಪುರ ಮೋಹನ್ರವರ ದೂರವಾಣಿ ಸಂಖ್ಯೆ ದೊರಕಿತು. ನನ್ನ ಬಹಳ ದಿನಗಳ ಬಯಕೆ ಕಂಪ್ಲಾಪುರ ಮೋಹನ್ರವರ ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದಾಗಿತ್ತು. ಆದರೆ ಸಮಯ ಸಂದರ್ಭಗಳು ಒದಗಿಬರಲೇ ಇಲ್ಲ. ಆಗಾಗಲೇ ಹಾಸನದ ಮನೆ ಮನೆ ಕವಿಗೋಷ್ಠಿ ಬಳಗದಲ್ಲಿ ಕೊಟ್ರೇಶ್ ಉಪ್ಪಾರ್ರವರ ನೇತೃತ್ವದಲ್ಲಿ ನಡೆಯುತ್ತಿದ್ದ ಹಲವಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆ ಸಂದರ್ಭಗಳಲ್ಲಿ ಕೆಲವು ಆತ್ಮೀಯ ಗೆಳೆಯರ ಸಲಹೆಯ ಮೇರೆಗೆ ಕೊಡಗಿನಲ್ಲಿ ಮನೆ ಮನೆ ಕವಿಗೋಷ್ಠಿ ಬಳಗವನ್ನು ಸ್ಥಾಪಿಸಬೇಕು ಎಂಬ ಕನಸು ಗರಿಕೆದರಿತ್ತು. ಕಾಲ ಗಳಿಗೆ ಕೂಡಿಬರಬೇಕು ಮಾತ್ರವಲ್ಲದೆ ಅನುಭವ ಕೂಡ ಜೊತೆಯಲ್ಲಿ ಇರಬೇಕು ಎಂಬುದನ್ನು ಈಗಾಗಲೇ ಕೆಲವು ಕಹಿ ಅನುಭವಗಳನ್ನು ಮೆಲುಕು ಹಾಕಿ ಅಳೆದು ಸುರಿದು ಮೇ ತಿಂಗಳ ಕೊನೆಯ ವಾರದ ವೇಳೆಗೆ ನವೆಂಬರ್ ಹನ್ನೊಂದು ಎರಡು ಸಾವಿರದ ಹದಿನೆಂಟನೇ ಭಾನುವಾರದಂದು ಮನೆ ಮನೆ ಕಾವ್ಯಗೋಷ್ಠಿ ಬಳಗದ ಉದ್ಘಾಟನೆ ಎಂದು ಸ್ವತಃ ನಿರ್ಧರಿಸಿಬಿಟ್ಟೆ. ಕಾರ್ಯಕ್ರಮ ಸ್ವಂತವಾಗಿ ಮಾಡಿ ಅನುಭವ ಇಲ್ಲ ಹಾಸನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ಗೆಳೆಯರ ಜೊತೆಗೆ ಸ್ಥಳವನ್ನು ತಲುಪುವ ವೇಳ...