ಭಾಮಿನೀ ಷಟ್ಪದಿ
ಭಾಮಿನಿ ಷಟ್ಪದಿ ೦೧ ಕೊರೆದು ದಿನವೂ ಧರೆಯ ಮಡಿಲನು ಹರಿಸಿ ಜಲವನು ಬರಿದು ಗೊಳಿಸಿರೆ ತರಿದು ವನವನಳಿಸಲು ಪರಿಸರ ಮಳೆಯು ಸುರಿದೀತೆ ಬರಿಯ ಮಾತಲಿ ವನವನುಳಿಸಿರೆ ತಿರಿದು ಬದುಕಲು ಮನವ ಮಾಡುತ ಧರೆಯ ಕಳೆದೊಡೆ ನಮ್ಮ ಪೀಳಿಗೆ ಮುಂದೆ- ಯುಳಿದೀತೆ ವೈ.ಕೊ. ವೈಲೇಶ ಪಿ ಎಸ್ ಕೊಡಗು ೧೩/೪/೨೦೧೯ ಭಾಮಿನಿ ಷಟ್ಪದಿ- ೦೨ ಇಳೆಯ ಕೊಳೆಯನು ತೊಳೆಯಬಾರದೆ ಮಳೆಯ ದೇವನೆ ನೀನು ಕೋಪವ ತಳೆದು ಮಳೆಯನು ಸರಿಸಿ ನಡೆದೊಡೆ ಸಾವು ಬರದೇನು ಅಳಿವ ಜೀವಿಯ ಮೊರೆಯ ಕೇಳದೆ- ಳಳಿಸಿ ಹಾಕಲು ಜೀವ ಸಂತತಿ ನಿಲುವ ತಳೆದುದು ಸರಿಯೆ ವರುಣನೆ ಕರುಣೆಯಿರದೇನು. ವೈ.ಕೊ. ವೈಲೇಶ ಪಿ ಎಸ್ ಕೊಡಗು ಭಾಮಿನಿ ಷಟ್ಪದಿ -೦೩ ಪಡುವಣದ ಹಾದಿ ಹಿಡಿದ ರವಿಯ ತಡೆಯಲಹುದೇ ಎಂದರಿಯದೇ ಮಡಿಲ ತುಂಬಾ ನೀರ ಹನಿಗಳ ಹೀರಿದಿಬ್ಬನಿಯು ಮಡಿಯತೊಡಗಿದ ಜಲದ ವೇಗಕೆ ತಡಿಯುಡುಗಲು ಮರುಗುತ ಮರೆಯದೆ ಗಡಬಡಿಸಿ ಧರೆಗಿಳಿದು ಮಾಯವಿಯಾಗತೊಡಗಿದನೆ *ವೈ.ಕೊ* *ವೈಲೇಶ ಪಿ ಎಸ್ ಕೊಡಗು* *೧೪/೪/೨೦೧೯* ಭಾಮಿನಿ ಷಟ್ಪದಿ-೦೪ ರವಿಯು ಲಘಬಗೆಯಿಂದ ದಿನವೂ ಕವಿದ ಮಂಜನು ತೊಡೆದು ಚಲಿಸುತ ಬುವಿಗೆ ತನುವಿನ ಕಿರಣ ಸೂಸಲು ಮೊದಲು ಗೊಂಡಿಹನು ಸವಿಯ ಕಿರಣಕೆ ಸಕಲ ಜೀವಿಯು ಭವದ ಬದುಕಿನ ದಿನದ ಕಾಯಕ- ದವನ ನಡೆಯನು ಹರುಷದಿಂದಲಿ ಎದುರು ಗೊಂಡಿಹರು ವೈ.ಕೊ. ವೈಲೇಶ ಪಿ ಎಸ್ ಕೊಡಗು ೧೫/೪/೨೦೧೯ ಭಾಮಿನಿ ಷಟ್ಪದಿ-೦೫ ಕೆರೆಯ ನೀರೊಳು ತೇಲಿ ನಲಿದಿರು- ವರಳು ಕಮಲದ ಪಕಳೆ ಮೇಲಣ ಜರಿಯ ಸೊಬಗ...
Comments
Post a Comment