ಮೌನ ಗೀತೆ

ಈ ದಿನದ ಮೊದಲನೇ ಗೀತೆ
====================

೧ ಮೌನ ಗೀತೆ
~~~~~~~~
ಬರಿಯ ಮಾತಿಗಿಂತಲೂ
ಗೀತೆ ಇಂದು ಮುಂದಿದೆ
ಮನದ ಮಾತು ತಿಳಿಸಲು
ಮೌನ ಗೀತೆ ಸಾಕಿದೆ ||ಪ||

ಪ್ರೇಮಿ ಪಾಡು ಒಲವ ಹಾಡು
ಯುಗಳ ಗೀತೆ ಆಗಿದೆ
ಮನಸ್ಸು ಮುರಿದು ಪ್ರೇಮ ಸರಿದು
ವಿರಹ ಗೀತೆ ಮೂಡಿದೆ  ||೧||

ಹೃದಯ ನೋವ ಹಂಚಿಕೊಳಲು
ಭಾವಗೀತೆ ಹಾಡಿದೆ
ದೇವನಲ್ಲಿ ಅಳಲು ಇಡಲು
ಭಕ್ತಿಗೀತೆ ಕೇಳಿದೆ ||೨||

ಯಾವ ಜನ್ಮ ಪುಣ್ಯ ಫಲವೊ
ನಮ್ಮ ನಾಡಲಿ ಜನಿಸಿದೆ
ಎಲ್ಲ ಮರೆತು ಕನ್ನಡಾಂಬೆ
ಸೇವೆ ಗೈಯ್ವ ಮನವಿದೆ  ||೩||

(ಎಲ್ಲವನ್ನೂ ಎರಡೆರಡು ಬಾರಿ ಹಾಡಿದರೆ ಉತ್ತಮ ಎಂದು ಈ ಕಿರಿಯನ ಭಾವನೆ)

*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೧/೯/೨೦೧೭

ಈ ದಿನದ ಎರಡನೆಯ ಗೀತೆ
______________________
ಪರಿಸರವ ಉಳಿಸಿರಿ
~~~~~~~~~~~
ಬನ್ನಿ ಬನ್ನಿ ಗೆಳೆಯರೆ
ಬನ್ನಿ ಬನ್ನಿ ಎಳೆಯರೆ
ಬನ್ನಿ ಬನ್ನಿ ಹಿರಿಯರೆ
ಭಾರತದ ಪ್ರಜೆಗಳೆ ||ಪ||

ಮಗುವೆ ನೀನು ಸಿಹಿಯ ತಿಂದು
ಸಿಪ್ಪೆಯನ್ನು ಎಸೆದರೆ ಕರಗದಲ್ಲ
ಸಿಪ್ಪೆಯದು ಇನ್ನೂರು ವರ್ಷವಾದರು
ಎಸೆಯದಿರು ಎಸೆಯದಿರು ಕಸವನು ||೧||

ಹೊಲ ಗದ್ದೆ ಕಸವೇ ತುಂಬಿ
ಬೆಳೆಯ ಬೆಳೆಯಲಾಗದು!
ಬೆಳೆಯ ಬೆಳೆಯದಿದ್ದ ಮೇಲೆ
ತಿನ್ನಲೇನು ಸಿಗುವುದು? ||೨||

ಗುಟುಕ ತಿಂದು ಅಲ್ಲೇ ಉಗಿದು
ಪರಿಸರವ ಕೆಡಿಸಿದೆ
ಸಾಲದೆಂದು ಪೊಟ್ಟಣವ
ನಿಂತಲ್ಲೆ ಬಿಸುಟಿದೆ. ||೩||

ಬಿಸುಟ ಕಸವು ಜಲಕಣ್ಣು ಸೇರಿ
ಗುಟುಕು ಜಲವು ದೊರಕದೆ
ಸಕಲ ಜೀವ ಸಂಕುಲಕೆ ಪ್ರಾಣ 
ಸಂಕಟ ಎನಿಸಿದೆ.  ||೪||

ಅಲ್ಲಿ ಇಲ್ಲಿ ಎಸೆದ ತ್ಯಾಜ್ಯ
ರೋಗಕಾರಕವಾಗಿದೆ
ನಮ್ಮ ಬದುಕು ನಮ್ಮ ಜೀವ
ನಾವೇ ಕಾಯಬೇಕಿದೆ   ||೫||

ಎಲ್ಲೇ ಹೊರಡಿ ಹೇಗೇ ಹೊರಡಿ
ಬಟ್ಟೆ ಬ್ಯಾಗು ಹಿಡಿಯಿರಿ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ 
ಪರಿಸರವ ಉಳಿಸಿರಿ ||೬||

*ವೈಲೇಶ ಪಿ ಯೆಸ್ ಕೊಡಗು*
*ಚಾಲ

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ