Posts

Showing posts from August, 2020

ಲೇಖನ ವಿಜ್ಞಾನ

ಉನ್ನತ ಸಂಸ್ಥೆಗಳಲ್ಲಿ ಅನುಭವಿಗಳ, ಜ್ಞಾನಿಗಳ ಅಗತ್ಯ ಬಹಳಷ್ಟಿದೆ. ಆದರೆ ಅದಕ್ಕಾಗಿ ನಿವೃತ್ತಿಯ ವಯೋಮಿತಿ ಏರಿಕೆ ಮಾಡುವುದು  ಸರಿಯೇ                    ನಿಜವಾಗಿಯೂ ನನಗೂ ಒಮ್ಮೊಮ್ಮೆ ಅನಿಸಿದ್ದುಂಟು ಅನುಭವ ಮೀರಿದ ಅರ್ಹತೆಯಿಲ್ಲ ಆದ ಕಾರಣ ಅನುಭವದ ಆಧಾರದ ಮೇಲೆ ಸೇವಾ ಅವಧಿಯನ್ನು ಹೆಚ್ಚಿಸಬೇಕೆಂದು ಯಾಕೆಂದರೆ ಅನುಭವಕ್ಕಿಂತ ಗುರುವಿಲ್ಲ ಆದರೆ ವಯೋಸಹಜ ಅನಾರೋಗ್ಯ, ನಿಶ್ಯಕ್ತಿ, ದೃಷ್ಟಿ ದೋಷ, ಇರುವವರು ಅಧಿಕ.  ಅದೆಷ್ಟೋ ಮಂದಿ ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಗಳು ಇದ್ದಾರೆ.  ಆದರೆ ಮಾನವನ ಸರಾಸರಿ ಆಯಸ್ಸನ್ನಪ್ರಹೊರತಾಗಿಹಾಗೂ ಮಾನವರ ದೈಹಿಕ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವಮಾನದ ದುಡಿಮೆಯಿಂದ ತಾನು ಗಳಿಸಿದ ಸಂಪತ್ತನ್ನು ಅನುಭವಿಸುವ ಸಾಧ್ಯತೆಗಾಗಿಯಾದರೂ, ಅಥವಾ ತನ್ನ ಮುಂದೆ ನಿಂತಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿರಾಮ ಜೀವನ ನಡೆಸಲು ೫೮ ಸೂಕ್ತ ನಿವೃತ್ತಿ ವಯಸ್ಸು ಎನ್ನಬಹುದು. ಇದರಿಂದಾಗಿ ನವ ಪೀಳಿಗೆಗೆ ನೌಕರಿ ಹೆಚ್ಚು ದೊರಕುವ ಸಾಧ್ಯತೆ ಕೂಡ ಇದೆ ಹಾಗೆಯೇ ಹೊಸ ಅನನುಭವಿ ವ್ಯಕ್ತಿಗಳಿಗೆ ಕೆಲಸ ನೀಡುವುದು ಸೂಕ್ತವಾಗಿದೆ ಎನಿಸುತ್ತದೆ. ನಿವೃತ್ತಿ ವಯಸ್ಸು ಏರಿದಷ್ಟು ಅನುಭವಕ್ಕೆ ತಕ್ಕಂತೆ ಪಗಾರದ ಹೆಚ್ಚಳವನ್ನು ಗಮನಿಸಿದಾಗ ಅದೇ ಒಬ್ಬರ ಪಗಾರಕ್ಕೆ ಹೊಸದಾಗಿ ಇಬ್ಬರು ಅಥವಾ ...
ಶರಣರ ಹಿರಿಮೆಯನ್ನು ಮರಣದಲ್ಲಿ ಕಾಣು ಎನ್ನುವುದು ವಾಡಿಕೆಯ ನುಡಿಗಟ್ಟು. ಒಬ್ಬ ವ್ಯಕ್ತಿ ಬದುಕಿರುವಾಗ ಮತ್ತೊಬ್ಬರನ್ನು ಹೊಗಳಿ ಅಥವಾ ಪ್ರಭಾವ ಬೀರುವ ಮೂಲಕ ತನ್ನನ್ನು ಹೊಗಳಿಸಿಕೊಳ್ಳಬಹುದು. ಅಥವಾ ಅವರಿಂದ ಪ್ರಯೋಜನ ಪಡೆಯಲೆಂದು ಹೊಗಳುವವರು ಇರಬಹುದು. ಅಂತಹ ಹೊಗಳಿಕೆಗಳಿಂದ ಬದುಕಿರುವ ಅವರಿಗೆ ಮುಜುಗರವೂ ಉಂಟಾಗಬಹುದು. ಇಂದಿನವರೆಗೆ ಅದೆಷ್ಟೋ ಪ್ರಾಧ್ಯಾಪಕರು ತಮ್ಮ ಶಿಷ್ಯ ಕೋಟಿಗಳನ್ನು ಹೊಂದಿರಬಹುದು ಆದರೆ ಕಿ.ರಂ. ನಾಗರಾಜ್‌ರವರಿಗೆ ದೊರಕಿದಂತಹ ಶಿಷ್ಯರು ದೊರಕದೆ ಇರಬಹುದೇ. ಅಥವಾ ಗುರುಶಿಷ್ಯರ ಅವಿನಾವ ಸಂಬಂಧಗಳೆಂದರೆ ಕಿ.ರಂ ಹಾಗೂ ಅವರ ಶಿಷ್ಯರುಗಳಂತೆ ಇರಬೇಕೆಂಬುದನ್ನು  ಇಂದಿನ ದಿನಮಾನಗಳಲ್ಲಿ ನಾವೆಲ್ಲರೂ ಅರಿಯಬೇಕಿದೆ. ಅಂತಹ ಕಿ.ರಂ ಕುರಿತು ಇಂದು ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಿಕೊಳ್ಳುವ ಬನ್ನಿ. ಹಾಸನ ಜಿಲ್ಲೆ ಸಾಹಿತ್ಯದ ಸಾಹಿತಿಗಳ ತವರು ಎಂದರೆ ಅತಿಶಯೋಕ್ತಿಯಲ್ಲ ಅಂತಹ ಹಾಸನ ಜಿಲ್ಲೆಯ ಕಿತ್ತಾ‌ನೆ  ಗ್ರಾಮದಲ್ಲಿ ರಂಗಣ್ಣ ನಾಗರಾಜ್‌ರವರು ಡಿಸೆಂಬರ್ ೫ ೧೯೪೨ ರಂದು ಜನಿಸಿದರು. ತಮ್ಮ ಬಿ.ಎ. ಪದವಿಯನ್ನು  ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಮುಗಿಸಿ ಮುಂದಿನ ಎಂ.ಎ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದ್ದ ಇವರು ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಮೂವತ್ತು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್...

ಮುಕ್ತಕ ಲಾವಣಿ

ಹೊನ್ನಿನ ಜಗವಿದು ~~~~~~~~~~ ನಿನ್ನಯ ನಾಮದ ಬಲದಲಿ ಬೆಳಗಿದೆ ಹೊನ್ನಿನ ತೆರದಲಿ ಜಗವಿಂದು| ರನ್ನರು ಜನ್ನರು ಬರೆದಿಹ ಕವಿತೆಯ ತಣ್ಣಗೆ ಪಾಡುವ ನಾವಿಂದು ||೧|| ಬೆಳಗಿನ ಪೂಜೆಯ ವೇಳೆಗೆ ದೇವಿಗೆ ಬೆಳಗಿರಿ ತುಪ್ಪದ ಹಣತೆಯನು| ಕಳಿತಿಹ ಮೆದುಳಿಗೆ ಶಕುತಿಯ ನೀಡುತ ಒಳಿತನು ಬಯಸಿರು ಜಗಕೆಂದು ||೨|| ಹೊಳೆಯದು ಬಲಿಯಲಿ ಕೆರೆಗಳು ತುಂಬಲಿ ಕೊಳೆಯದು ಕಳೆಯಲಿ ಜಗದೊಳಗೆ| ಬೆಳೆಯಲು ಧವಸವ ಹರುಷದಿ ಲೋಗರು ಸುಳಿವರು ನಿನ್ನಯ ದೇಗುಲಕೆ ||೩|| ಜಗದೊಳಗೊಳಿತನು ಬಯಸುತ ಬೇಡುವೆ ಖಗಮಿಗಗಳನೀ ಸಲಹೆಂದು| ಜಗಮಗಿಸಲಿವನ ಉಳಿಯಲಿ ಗಿಡಮರ ಹೊಗುಳುವೆ ನಿಮ್ಮಯ ನಾಮವನು ||೪|| ಭಕ್ತರ ಸೇವೆಗೆ ಒಲಿಯುವ ದೇವನೆ ಶಕ್ತಿಯ ನೀಡುತ ಸಲಹೆಮ್ಮ| ಯುಕ್ತಿಯ ತೋರದೆ ಶಿರಸಾ ನಮಿಸುವೆ ಮುಕ್ತಿಯ ಕರುಣಿಸು ನಮಗೆಂದು ||೫|| ವೈ.ಕೊ. ವೈಲೇಶ ಪಿ ಎಸ್ ಕೊಡಗು ೨೬/೭/೨೦೧೯ ಭಾರತ ದೇಶವ ಕಾಯುವ ಯೋಧರೆ ತೋರುವೆ ಗೌರವ ನಿಮಗಿಂದು ದೂರದ ಗಡಿಯಲಿ ನಿಂತಿಹ ವೇಳೆಗೆ ಯಾರದೆ ನೆನಪದು ಬರದಿರಲಿ ದೇಶದ ಸೇವೆಗಧೀಶನು ನಿನ್ನನು ವೇಷವ ಮರೆಯಿಸಿ ಕಳುಹಿಸಿದ ದೋಷವನೆಣಿಸದೆ ಕರುಣೆಯನೀಯದೆ ಮಾಸದ ನೆನಪನು ಜೊತೆಗಿಟ್ಟ ಕಾರ್ಗಿಲ್ ಮೇಲ್ಗಡೆ ನುಸುಳುವ ಚೋರಗೆ ನೀರ್ಗಲ್ ಮೇಲೆಯೆ ಕಾದಿರುವೆ ಬೇರ್ಗಳ ನೆನಪಿನ ಹಾಡದು ನಿನ್ನಯ ಮಾರ್ಗವ ತೋರುತ ಕೆಣಕುತಿದೆ ಮನೆ ಮಠವೆನ್ನುತ ಸಿರಿತನ ಮೆರೆದಿಹ ಮನಗಳು ನಿಮಗದು ಸಮವೇನು ತನುಮನವೆಲ್ಲವನತಿಸುಖ ಬಯಸದೆ ಘನತರ ಕಾರ್...