ಮನದ ಕಂಪನ

ಮನದ ಕಂಪನ
••~•~•~•~•~••
ದೂರ್ತ ಪಾಪಿ ಪಾಕಿಸ್ತಾನಿಗಳೆ
ನಿಜಕ್ಕೂ ನೀವು ಮಾನವರೇ ?
ಅದೆಷ್ಟು ಜೀವಗಳ ನೆತ್ತರ ಹೀರಿದಿರಿ
ಅಸುರ ಸಂತತಿಯ ಹೇಡಿಗಳೆ

ನಿಮಗ್ಯಾವ ಷರತ್ತುಗಳರಿವಿಲ್ಲ
ಮತಧರ್ಮದ ಪರಂತು ಪರಿವೆಯಿಲ್ಲ
ಪರಧರ್ಮ ಸಹಿಷ್ಣುತೆಯೆಡೆ ಒಲವಿಲ್ಲ
ಈ ಜಗದೊಳು ನಿಮಗ್ಯಾರ ಬಲವಿಲ್ಲ 

ದೇಶ ಕಾಯುವ ಶೂರ ಧೀರರಿವರು
ನಮ್ಮ ಕಾಯಲೆಂದೆ ಬಂದ ದೇವರು
ಉಗ್ರರುರಿಯ ದ್ವೇಷಕೆ ಸಿಲುಕಿದರು
ಬಂಧುಗಳ ನೋವ ಕೇಳುವವರಾರು

ದೇಶದೆಲ್ಲೆಡೆಯ ಪ್ರತಿ ನಿಜ ಭಾರತೀಯರ
ಮನವಿಂದು ಕಂಪಿಸಿ ಆಕ್ರೋಶದಿಂದಲಿ
ಉಗ್ರ ದರಿದ್ರರ ಹೆಡೆಮುರಿಗೆ ಕಟ್ಟಿರೆಂದಿದೆ
ರಣಹೇಡಿಗಳ ರಕುತವ ಚೆಲ್ಲಾಡಬೇಕಿದೆ

ಅಮಾಯಕ ನಾಯಕರೆ ಪಕ್ಷಬೇದ ತೊರೆದು
ಭಾರತಾಂಭೆಯ ರಕ್ಷಣೆಗೆ ಕಟಿ ಬದ್ದರಾಗಿ
ದೇಶವ ಪರಭಾರೆ ಮಾಡಿದಿರಿ ಸ್ವಾರ್ಥಕೆ
ದೇಶದೊಳಿತನು ಬಯಸಿ ನಿಜ ನಾಯಕರಾಗಿ

ವೈಲೇಶ ಪಿ ಎಸ್ ಕೊಡಗು
೧೫/೨/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು