ಲೋಕಪಾವನೆ


ಲೋಕಪಾವನೆ
~~~~~~~~
ಸುರಿಯಿತು ಹೊನ್ನಿನ ಮಳೆಯಂತೆ
ಬೆರೆಯಿತು ಮಣ್ಣನು ಮಧುವಂತೆ
ಹರಿಯಿತು ಹಾಲಿನ ನೊರೆಯಂತೆ
ಬೆರೆಯಿತು ಕಾವೇರಿ ಕಡಲ ಜೊತೆ  ||ಪ||

ಬಳಸಿದ ಊರಿಗೆ ಬೆಳೆಯನು ನೀಡುತ
ಬೆಳೆಸಿದ ಬೆಳೆಗೆ ಉಸಿರನು ಬೆರೆಸುತಾ
ಮೌನದಿ ನಲ್ಮೆಯ ಬೆಸುಗೆಯ ಸುರಿಸುತಾ
ಮಾತೆಯ ಮನದಲಿ ಮಮತೆಯು ತುಂಬಿತ್ತಾ
ರಾಜ್ಯದ ಜನರಿಗೆ ನೆರೆರಾಜ್ಯದ ಮನವಿಗೆ
ಕರುಣೆಯ ತೋರಿತ್ತಾ ಕಡಲನು ಬೆರೆಯಿತ್ತಾ ||೧||

ಜಾತಿ ವಿಜಾತಿಯ ಪೆಸರನು ತಿಳಿಯದೆ
ಧರ್ಮ ಅಧರ್ಮದ ಮೋಸಕೆ ಸೋಲದೆ
ನಾನು ನನದಿದು ಎಂಬುದು ಅರಿಯದೆ
ಸಕಲರ ಬದುಕಲಿ ಬೇಧವ  ಮೆರೆಯದೆ
ಸರ್ವರ ಬಾಳಿಗೆ ಜ್ಯೋತಿಯ  ಬೆಳಗಿತ್ತಾ
ಮನುಕುಲದೇಳಿಗೆ ಮನದಲಿ ಮೂಡಿತ್ತಾ
ಲೋಕಪಾವನೆಯ ಹೆಸರದು ಉಳಿದಿತ್ತಾ  ||೨||

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು