Posts

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

Image
ನಾ ಕಂಡಂತೆ ಕವಿ ಸಾಹಿತಿ.:- ಅನುಪಮಾ ಸುಲಾಖೆ. ಇವರು ಶ್ರೀಮತಿ ಅನುಪಮ ಸುಲಾಖೆ ಗೃಹಿಣಿ.ಅನಿಲ್ ಕುಮಾರ್ ಸುಲಾಖೆ ಇವರ ಧರ್ಮಪತ್ನಿ  ಶಿವಮೊಗ್ಗ ನಗರದ ಬಾಲಚಂದ್ರ ರಾವ್ ನಾಜರೆ ಮತ್ತುಗಾಯತ್ರಿ ನಾಜರೆ ದಂಪತಿಯ ಪುತ್ರಿ. ಶಿವಮೊಗ್ಗದ ಮಕ್ಕಳ ವಿದ್ಯಾ ಸಂಸ್ಥೆ ಮತ್ತು ಕಸ್ತೂರಿ ಬಾ ಕಾಲೇಜಿನಲ್ಲಿ ಪಿಯುಸಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ವೃತ್ತಿ ಯಿಂದ ಗೃಹೋದ್ಯಮಿಯೂ ಆಗಿರುವ ಇವರು ಓದು, ಬರೆಹ, ಗಾಯನ, ಯೋಗ, ಕರಕುಶಲತೆಯನ್ನು ಪ್ರವೃತ್ತಿಯಾಗಿ ಉಳಿಸಿಕೊಂಡಿದ್ದಾರೆ. ಇವರು ದೈನಂದಿನ ಸುಭಾಷಿತ ರಚನೆಯಲ್ಲಿ ಸಿದ್ಧಹಸ್ತರು ಈವರೆಗೆ ಸುಮಾರು ೧೩೪೦ ಸುಭಾಷಿತ ರಚನೆ ಮಾಡಿದ್ದಾರೆ. ಜೊತೆಗೆ ಅಂತರ್ಜಾಲದ ಇನ್ನಿತರ ಸಾಹಿತ್ಯಿಕ ಬಳಗಗಳಲ್ಲಿ ಪ್ರತಿದಿನ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ದಿನಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಹಾಗೂ ಪ್ರಜಾವಾಣಿ, ಬೆಂಗಳೂರು ವಾಯ್ಸ್, ಪಿಸುಮಾತು, ಜನನಾಡಿ, ಜನ ಮಿಡಿತ, ಸ್ತ್ರೀ ಜಾಗೃತಿ, ದಿ ಜರ್ನಿ ಆಫ್ ಸೊಸೈಟಿ, ಹಂಪಿ ಟೈಮ್ಸ್ ,ಬಳ್ಳಾರಿ ಬೆಳಗಾಯಿತು, ಕಸ್ತೂರಿ ಪ್ರಭೆ, ಇಂದು ಸಂಜೆ ,ನಾಡಿನ ಸಮಾಚಾರ ,ಪ್ರತಿನಿಧಿ, ಮಾಳವಿ ಪತ್ರಿಕೆ, ಟೈಮ್ಸ್ ಆಫ್ ಕರ್ನಾಟಕ. ಮಾನಿನಿ ಪತ್ರಿಕೆಗಳಲ್ಲಿ ಇವರ ಲೇಖನ ಕವಿತೆಗಳು ಪ್ರಕಟವಾಗಿವೆ.                       ...

ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಕೋಮಲ ಕಮರವಾಡಿ.

Image
ನಾ ಕಂಡಂತೆ ಕವಿ ಸಾಹಿತಿಗಳು. ಮಾಲಿಕೆ:- ಕೋಮಲ ಕಮರವಾಡಿ  ನಾ ಕಂಡಂತೆ ಕವಿ ಸಾಹಿತಿಗಳು. ಮಾಲಿಕೆ:- ಕೋಮಲ ಕಮರವಾಡಿ. ಇವರು ಕೋಮಲ ಕಮರವಾಡಿ. ಚಾಮರಾಜನಗರದ ಕಮರವಾಡಿ ಗ್ರಾಮದ ಮಹದೇವಸ್ವಾಮಿಯವರ ಧರ್ಮಪತ್ನಿ ಶ್ರೀಮತಿ ಕೋಮಲ ಕಮರವಾಡಿ. ಇವರು ಚಾಮರಾಜ ನಗರದ ಮಹದೇವಪ್ಪ ಮತ್ತು ರಾಜಮ್ಮ ದಂಪತಿಯ ಪುತ್ರಿ. ಎಳವೆಯಿಂದಲೂ ಓದುವ ಹವ್ಯಾಸವನ್ನು ಬೆಳೆಸಿಕೊಂಡವರು. ಮುಂದೆ ಅದು ಬರವಣಿಗೆಯಾಗಿ ತಂತಾನೇ  ತಿರುಗಿಕೊಂಡಿತು.        ಕಥೆ, ಕವನ ,ಹನಿಗವನ ಚುಟುಕು ಭಾವಗೀತೆ, ಶಿಶುಗೀತೆ, ಮಕ್ಕಳ ಪದ್ಯ, ಗಝಲ್, ರುಬಾಯಿ, ಟಂಕಾ ಮುಂತಾದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಓದುವ ಮತ್ತು ಬರೆಯುವುದನ್ನು ಹವ್ಯಾಸವಾಗಿ ಬದಲಾಯಿಸಿಕೊಂಡರು. ಆಕಾಶವಾಣಿಯ ವಿವಿಧ ನಿಲಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಜೊತೆಗೆ ಚಿತ್ರಕಲೆಯಲ್ಲಿ ಆಚಾರ್ಯ ಚಿತ್ರಕಲಾ ಭವನದಲ್ಲಿ 2 ವರ್ಷಗಳ ಕಾಲ ಅಂಚೆ ಮೂಲಕ ತರಬೇತಿ ಪಡೆದಿದ್ದಾರೆ.              ಇವರ ಕವನಗಳು ಹಲವಾರು ಸಂಪಾದಿತ ಕವನ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿರುತ್ತಾರೆ ದಸರಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿಪತ್ರ ಪಡೆದಿರುತ್ತಾರೆ. ಹಲವಾರು ಅಂತರ್ಜಾಲ ಬಳಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ,...

ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೪ ಅಮೃತ ಗೌಡ ಪಾಟೀಲ

Image
ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ:- ೩ ಅಮೃತ ಗೌಡ ಪಾಟೀಲ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿಯ ನಾಗನಗೌಡ ಪಾಟೀಲರ ಪುತ್ರ ಅಮೃತಗೌಡ ಪಾಟೀಲರು. ರಾಯಚೂರು ಜಿಲ್ಲೆಯ ಮಾನ್ವಿ ಜಿಲ್ಲೆ ಕಸಬಾ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಸೃಜನಶೀಲ ವ್ಯಕ್ತಿತ್ವದ ಇವರು ಸದಾ ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ ಎನ್ನುವುದಕ್ಕಿಂತ ಎಲ್ಲ ರಂಗಗಳಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಇವರು ಕಲಿತ ವಿಚಾರ ವಿದ್ಯೆಗಳು ಈ ರೀತಿಯಲ್ಲಿ ಇವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯನ (ವಿದ್ವತ್) ಹಾಗೂ ಹಾರ್ಮೋನಿಯಂ ಸಾಥ್ ಜೊತೆಗೆ ತಮ್ಮ ಶಾಲಾ ಮಕ್ಕಳಿಗೆ ಸಂಗೀತದ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಬೈಕು ದುರಸ್ತಿ, ಕಾರು ದುರಸ್ತಿ, ಬಡಗಿ ಕೆಲಸ,ನೀರೆತ್ತುವ ಯಂತ್ರದ ರೀವೈಡಿಂಗ್ ನಂತಹ ಕೆಲಸದ ಜೊತೆಗೆ ಬೇಸಾಯ, ಪುರಾಣ ಹೇಳುವುದು, ಕನ್ನಡ ಛಂದಸ್ಸು ಸಂಸ್ಕೃತ ಛಂದಸ್ಸು ಹಾಗೂ ಕಾವ್ಯ ರಚನೆಯ ಕುರಿತು ಉಪನ್ಯಾಸ ನೀಡುವುದು. ನಾಟೀ ವೈದ್ಯ (ಆಯುರ್ವೇದ) , ಯಂತ್ರ ಮಂತ್ರ ತಂತ್ರ ವಿದ್ಯೆ, ಹೋಮ ಹವನ, ಮೂರ್ತಿ ಪ್ರತಿಷ್ಟಾಪನಾ ಕಾರ್ಯ ಮುಂತಾದವುಗಳನ್ನು ಕರಗತಗೊಳಿಸಿಕೊಂಡಿದ್ದಾರೆ.  ಪ್ರವೃತ್ತಿಯಲ್ಲಿ ಕಥೆ,ಕವನ, ವಚನ, ನಾಟಕ, ಕಾವ್ಯ ಮತ್ತು ಶಬ್ದಕೋಶ ರಚನೆಯಂತಹ ಮಹತ್ವದ ಕೆಲಸವನ್ನೂ ಸಹ ಮಾಡುತ್ತಿರುತ್ತಾರೆ. ಇವರು ಶ್ರೀ ಶ್ರೀ ಷ...

ನಾ ಕಂಡ ನಾಡ ಸಾಹಿತಿಗಳ ಪರಿಚಯ ಮಾಲಿಕೆ :-೧. ಎ.ಎಸ್. ಪ್ರಭಾವತಿ ಪಿರಿಯಾಪಟ್ಟಣ

Image
ರಾಜ್ಯ ಮಟ್ಟದ ಎಲೆಮರೆಯ ಸಾಹಿತಿಗಳ ಪರಿಚಯ ಮಾಲಿಕೆ:- ೧  ಎ ಎಸ್ ಪ್ರಭಾವತಿ ಎಂಬ ಇವರ ಕಾವ್ಯನಾಮ ಪ್ರಭಾರಾವ್ ಮೈಸೂರಿನ ಎ ಎನ್ ಸುಬ್ಬರಾವ್ ಮತ್ತು ಅನಂತಲಕ್ಷಮ್ಮ ದಂಪತಿಗಳ ಪುತ್ರಿಯಾಗಿ 25-1-1953 ರಲ್ಲಿ ಜನಿಸಿದವರು ಪ್ರವೃತ್ತಿಯಲ್ಲಿ ಸಂಗೀತ ಗಾಯನ ಮತ್ತು ಆಲಿಸುವುದು ಒಳ್ಳೆಯ ಸಾಹಿತ್ಯ ವನ್ನು ಓದುವುದು ಹೂವಿನ ಗಿಡಗಳನ್ನು ಬೆಳೆಸುವುದು,ಭಜನೆ ದೇವರನಾಮಗಳನ್ನುಕಲಿಸುವುದು ರಂಗೋಲಿ ಬಿಡಿಸುವುದು ಸಾಹಿತ್ಯ ಸೇವೆಯ ವಿವರ ಪಿರಿಯಾಪಟ್ಟಣ ದಲ್ಲಿ ಶ್ರೀಯುತ ಕಂಪಲಾಪುರ ಮೋಹನ್‌ರವರು ನಡೆಸುತ್ತಿದ್ದ ಮನೆ ಮನೆ ಕವಿಗೋಷ್ಠಿ ಯಲ್ಲಿ ತಪ್ಪದೆ ಭಾಗವಹಿಸುತ್ತಿದ್ದವರು ಸ್ವತಃ ಇವರ ಮನೆಯಲ್ಲಿಯೂ ಎರಡು ಬಾರಿ ಕವಿ ಗೋಷ್ಠಿಯನ್ನು ಪ್ರಾಯೋಜಿಸಿದ್ದಾರೆ ಮೈಸೂರಿನ ಮುಕ್ತಕ ಅಕಾಡಮಿಯ ವತಿಯಿಂದ ನಡೆಸುವ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ ಮುಕ್ತಕ ರಚನಾ  ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಇವರು1998ರಲ್ಲಿ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯ ಪ್ರಪಂಚ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ 2010ರಲ್ಲಿ ಮೈಸೂರು ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಪಿರಿಯಾಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ ಕವಿ ಗೋಷ್ಠಿಯಲ್ಲಿ  ಕವನ ವಾಚಿಸಿದ್ದಾರೆ ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುವ ಇವರು ಕಂಪಲಾಪುರ ಮೋಹನ್‌ರವರು ಶಾಲೆ ಕಾಲೇಜುಗಳಲ್ಲಿ ನಡೆಸುತ್ತಿದ್ದ ಕವಿಗೋಷ್ಠಿಗಳಲ್ಲಿ ಮುಖ್...

ನಾ ಕಂಡಂತೆ ಕನ್ನಡಕ್ಕಾಗಿ ದುಡಿದ ಹಿರಿಯ ಜೀವ

Image
ನಮ್ಮೂರ ಹೆಮ್ಮೆಯ ಕನ್ನಡದ ಕಂದ ಡಿ.ಜೆ. ಪದ್ಮನಾಭ  ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ|| ಆರ್ ಗುಂಡೂರಾವ್‌ರವರ ಹಸ್ತದಿಂದ ವಿರಾಜಪೇಟೆ ತಾಲ್ಲೂಕಿನ "ಕರ್ನಾಟಕ ಸಂಘದ ಕಟ್ಟಡ" ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದ ಡಿ.ಜೆ.ಪದ್ಮನಾಭರವರ ಮುಖದಲ್ಲಿ ಅದುವರೆಗೆ ತಾವು ಪಟ್ಟ ಕಷ್ಟಗಳೆಲ್ಲ ಕರಗಿ ನೀರಾಗಿ ಕಿನಗೆಯೊಂದು ಮೂಡಿಬಂತು. ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ಯುವಶಕ್ತಿಯಂತಿದ್ದ ಪದ್ಮನಾಭ ಮತ್ತು ಗೆಳೆಯರ ಗುಂಪು 1962 ರಲ್ಲಿ ಕರ್ನಾಟಕ ಸಂಘ ಸ್ಥಾಪಿಸುವ ಜೊತೆಗೆ ಸಂಘಕ್ಕೆ ಸ್ವಂತ ಕಟ್ಟಡವನ್ನು ಹೊಂದಬೇಕೆಂಬ ಮಹದಾಸೆಯೊಂದಿಗೆ ರಂಗಕ್ಕಿಳಿದು ದಿನಾಂಕ 15/2/1972ರಂದು  ದಿ|| ಮಾಲೂರು ಸೊಣ್ಣಪ್ಪ ದಿ|| ಬೀchi ಯವರು, ಭಾರತದ ಪ್ರಪ್ರಥಮ ದಂಡನಾಯಕರಾಗಿದ್ದ ಕೊಡಗಿನ ಕಲಿ ದಿ|| ಫೀಲ್ಡ್ ಮಾರ್ಷಲ್ ಕೆ.ಯಂ ಕಾರ್ಯಪ್ಪನವರು ಹಾಗೂ ಇನ್ನೂ ಅನೇಕ ಹಿರಿಯ ಕಿರಿಯರನ್ನು ಸಾಕ್ಷಿಯಾಗಿರಿಸಿ ಉದ್ಘಾಟಿಸಿದರು. ಕೇವಲ ಕಟ್ಟಡವಾದರೆ ಸಾಲದೆಂದು ಅದೇ ಕಟ್ಟಡದಲ್ಲಿ ಪುಸ್ತಕ ಭಂಡಾರ, ವಾಚನಾಲಯ, ವಯಸ್ಕರ ಶಿಕ್ಷಣ ಶಾಲೆ, ಕನ್ನಡ ಬಾರದ ಇತರ ಭಾಷಿಕರಿಗೆ ಕನ್ನಡ ಕಲಿಸುವ ತರಗತಿಗಳು, ಸಂಗೀತ ನೃತ್ಯ ತರಬೇತಿ ತರಗತಿಗಳು, ಕರ್ನಾಟಕ ಯುವಕ ಸಂಘ ಮತ್ತು ಕಿಶೋರಿ ಸಂಘ ಇತ್ಯಾದಿಗಳನ್ನು ಸ್ಥಾಪಿಸಿದರು.  1978 ರಲ್ಲಿ ಕರ್ನಾಟಕ ಕೊಡವ ಭಾಷಾಬಿವೃದ್ಧಿ ಪ್ರಥಮ ಕೊಡವ ಭಾಷಾ ಸಮ್ಮೇಳನವನ್ನು ವಿರಾಜಪೇಟೆಯಲ್ಲಿ ಸಂಘಟಿಸುವ ಮುನ್ನ 1970ರಲ್ಲಿ ಕ...

ಹಿರಿಯ ಕವಯಿತ್ರಿ ಸಂಘಟಕಿ ಹೇಮಗಂಗಾರವರು

Image
ನಾ ಕಂಡಂತೆ ಕವಿ ಸಾಹಿತಿ ಕಲಾವಿದರು ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ ೬ ಹೇಮಗಂಗಾ. ಎ. May 18, 2021 ಶ್ರೀಮತಿ ಹೇಮಗಂಗಾ ಶ್ರೀಧರ್. ಮೈಸೂರಿನ ಹೇಮಗಂಗಾರವರು ಮೂಲತಃ ಚಾಮರಾಜನಗರದ ಶ್ರೀ. ಎನ್. ಅಶ್ವತ್ಥನಾರಾಯಣ ಹಾಗೂ ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರಿಯಾಗಿದ್ದಾರೆ. ಕವಯಿತ್ರಿ,ಸಂಘಟಕಿ ಹಾಗೂ ಸಂಸ್ಕೃತಿ ಪೋಷಕರಾದ  ಇವರು 01 /07/1961 ರಂದು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ಶಾಲೆಯನ್ನು  ಬಾಲ್ ಬ್ಯಾಡ್ಮಿಂಟನ್ ಹಾಗೂ ಕೊಕ್ಕೋ ಆಟಗಳಲ್ಲಿ ಪ್ರತಿನಿಧಿಸಿದ್ದವರು. ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಎಂ.ಎಸ್ಸಿ.ಯಲ್ಲಿ ( 1983) ಮೂರನೇ ಸ್ಥಾನ ಗಳಿಸಿದ್ದಾರೆ. ಅಧ್ಯಾಪಕಿಯಾಗಿ ದುಡಿದ ಅನುಭವವೂ ಇವರಿಗಿದೆ. ಸಿತಾರ್ ವಾದಕಿಯಾಗಿ ರಾಜ್ಯ ಮಟ್ಟದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಕ್ರಮವಾಗಿ 3 ಮತ್ತು 2 ನೇ ಸ್ಥಾನಗಳನ್ನು ಗಳಿಸಿರುವ ಇವರು ಮೈಸೂರು ಆಕಾಶವಾಣಿಯಲ್ಲಿ ಹವ್ಯಾಸಿ ಕಲಾವಿದೆಯಾಗಿದ್ದಾರೆ. ಈಗಾಗಲೇ "ಸಿರಿಗನ್ನಡ ವೇದಿಕೆ"ಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಮೈಸೂರಿನ  ಜಿಲ್ಲಾಧ್ಯಕ್ಷೆಯಾಗಿ ಕಳೆದ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಹಾಲಿ ರಾಜ್ಯಾಧ್ಯಕ್ಷರಾಗಿ ವೇದಿಕೆಯನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.ತಮ್ಮನ್ನು ಯಶಸ್ವೀ ಸಂಘಟಕಿಯಾಗಿ ರೂಪಿಸಿದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್...

ಕವಯಿತ್ರಿ ಮತ್ತು ಬಹುಮುಖ ಪ್ರತಿಭೆ ಪ್ರೇಮಾ ಆರ್ ಶೆಟ್ಟಿ

Image
ರಾಜ್ಯ ಮಟ್ಟದ ಕವಯಿತ್ರಿ ಶ್ರೀಮತಿ ಪ್ರೇಮಾ ಆರ್ ಶೆಟ್ಟಿ. ಶ್ರೀಮತಿ ಪ್ರೇಮಾ ಆರ್ ಶೆಟ್ಟಿ. ಇವರು ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿಯ ಪ್ರೌಢ ಶಾಲಾ ವಿಭಾಗದಲ್ಲಿ ಕಳೆದ 3 ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಬರಹಗಾರರು, ಕವಯಿತ್ರಿ, ಅಂಕಣಕಾರರು, ಕಾರ್ಯಕ್ರಮ ನಿರ್ವಾಹಕರು, ಫ್ಯಾಷನ್ ಡಿಸೈನರ್, ಕೌನ್ಸಿಲರ್, ಸಾಹಿತಿ, ಸ್ಪೋಕನ್ ಇಂಗ್ಲಿಷ್ ಟ್ರೈನರ್, ಮಾಸ್ಟರ್ ರಿಸೋರ್ಸ್ ಪರ್ಸನ್, ತುಳು ಕಲಿಸುವವರು ಹಾಗೂ ನಿತ್ಯ ಕಲಿಕಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.                        ಇವರು "ಹನಿ ಬಿಂದು" ಎಂಬ ಕಾವ್ಯ ನಾಮದಿಂದ ಕನ್ನಡ, ತುಳು ಹಾಗೂ ಆಂಗ್ಲ ಭಾಷೆಗಳ ಸಾಹಿತ್ಯದಲ್ಲಿ ಪಳಗಿದ ಕೈ ಆಗಿದ್ದಾರೆ. ಅವರು ದಿ. ರಮೇಶ್ ಶೆಟ್ಟಿ  ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನಿಸಿದವರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖದಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್...