Posts

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

Image
ನಾ ಕಂಡಂತೆ ಕವಿ ಸಾಹಿತಿಗಳು :- ಡಾಕೇಶ್ ತಾಳಗುಂದ  ಇವರ ಸಂಪೂರ್ಣ ಹೆಸರು:-  ಡಾಕೇಶ್ವರಪ್ಪ.ಆರ್.ಬಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ  ರಾಮಪ್ಪ. ಬಿ. ಹಾಗೂ   ರೇಣುಕಮ್ಮ ದಂಪತಿಯ ಮಗನಾಗಿ ೧೯೭೯ರ ಮಾರ್ಚ್ ೨೨ರ ಗುರುವಾರದಂದು ಜನಿಸಿದ್ದಾರೆ. ಇವರಿಗೆ ಸಹೋದರರಾಗಿ ಯೋಗೇಶ್ವರ, ಧರಣೇಶ್ ಸಹೋದರಿಯಾಗಿ ಭಾಗ್ಯಲಕ್ಷ್ಮೀ ಇದ್ದಾರೆ. ಪ್ರೀತಿಯ ಅತ್ತೆ ಸೋಮಕ್ಕನ ಮಮತೆ ಪ್ರೀತಿಯನ್ನು ತಾಯಿ ರೇಣುಕಮ್ಮನ ಅಕ್ಕರೆಯಂತೆಯೇ ಸಮನಾಗಿ ಉಂಡು ಬೆಳೆದವರು.‌          ಎಂ.ಎ, ಬಿ.ಎಡ್. ಎನ್ ಇ ಟಿ ಪದವಿಗಳನ್ನು ಪಡೆದ ಬಳಿಕ ೦೭.೦೮.೨೦೦೮ ರಿಂದ ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ ಅಂಚೆ ಬಂಟ್ವಾಳ ತಾಲೂಕ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ್ದಾರೆ. ದಿನಾಂಕ ೦೧.೦೪.೨೦೧೫ ರಿಂದ ೧೧.೧೧.೨೦೧೬ರ ವರೆಗೆ ಪ್ರಭಾರ ಮುಖ್ಯಶಿಕ್ಷಕನಾಗಿ ಅದೇ ಶಾಲೆಯಲ್ಲಿ ಬಡ್ತಿ ಪಡೆದು ಸೇವೆ ಮುಂದುವರಿಸಿದ್ದಾರೆ.  ೧೨.೧೧.೨೦೧೬ ರಿಂದ ಸರಕಾರಿ ಪ್ರೌಢಶಾಲೆ ಕುಂಚೂರು ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸವಳಂಗದಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಪ್ರಸ್ತುತದವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಎಸ್‌.ಎಲ್.ಸಿ ಯಲ್ಲಿ...

ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ

Image
ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ ಇವರು ಅಭಿಜ್ಞಾ ಪಿ.ಎಮ್.ಗೌಡ.‌ ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮಣ್ಣ, ಪುಟ್ಟಮ್ಮ ದಂಪತಿಯ ಪುತ್ರಿ.  ಅಭಿಜ್ಞಾ.ಪಿ.ಎಂ.ಗೌಡರು ತಮ್ಮ ವಿದ್ಯಾಭ್ಯಾಸವನ್ನು ನಾಗಮಂಗಲದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿ ಯು ಸಿ, ಹಾಗೂ ಬಿ.ಎ. ಪದವಿಯತನಕ ಮುಗಿಸಿ ಬಿ.ಇಡಿ, ಪದವಿಯನ್ನು ತುಮಕೂರಿನಲ್ಲಿ ಪಡೆದುಕೊಂಡಿದ್ದಾರೆ.  ಆ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಕನ್ನಡ ಸ್ನಾತಕೋತರ ಪದವಿ ಪಡೆದ ನಂತರ ಕನ್ನಡ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಪ್ರವೃತ್ತಿಯಲ್ಲಿ ಬರೆವಣಿಗೆ. ಓದುವುದನ್ನು ಬಲವಾಗಿ ಮೈಗೂಡಿಸಿಕೊಂಡು ಸಾಹಿತ್ಯದ ಚಟುವಟಿಕೆಯನ್ನು ಸ್ವಯಿಚ್ಛೆಯಿಂದ ಆಸ್ವಾಧಿಸುತ್ತಾ  ಪಾಲ್ಗೊಳ್ಳುವುದನ್ನು ಬೆಳೆಸಿಕೊಂಡಿರುತ್ತಾರೆ.                      "ಶ್ರೀ ಶಾರದ ವೇದಿಕೆ"ಯೆಂಬ ವಾಟ್ಸ್‌ಅಪ್ ಬಳಗವೊಂದನ್ನು ನಿರ್ಮಿಸಿಕೊಂಡು ಸಾಹಿತ್ಯದ ಚಟುವಟಿಕೆಗಳನ್ನು ಪ್ರತಿವಾರವೂ ಆಯೋಜಿಸುತ್ತಿದ್ದಾರೆ.  ಛಂದಸ್ಸಿನ ಹಲವು ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ಕೊಡುವಷ್ಟು ಪ್ರಬುದ್ಧೆಯಾಗಿದ್ದಾರೆ.  ಕವಿಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆ ಸಾಹ...